Advertisement

ಕುಂಭಕೋಣಂಗೆ ರೈಲಿನಲ್ಲಿ ಅಡಿಕೆ

06:36 AM Sep 16, 2020 | mahesh |

ಮಂಗಳೂರು: ನಗರದ ಸೆಂಟ್ರಲ್‌ ನಿಲ್ದಾಣದಿಂದ ರೈಲಿನ ಮೂಲಕ ಕುಂಭಕೋಣಂಗೆ 23 ಟನ್‌ ಅಡಿಕೆಯನ್ನು ಮಂಗಳವಾರ ಕಳುಹಿಸಲಾಯಿತು. ಲಾಕ್‌ಡೌನ್‌ ಆದ ಬಳಿಕ ಕಳೆದ ಆರು ತಿಂಗಳುಗಳಲ್ಲಿ ರೈಲಿನ ಮೂಲಕ ಕುಂಭಕೋಣಂಗೆ ಎರಡನೇ ಬಾರಿಗೆ ಅಡಿಕೆ ಸಾಗಿಸಲಾಗುತ್ತಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸೆಂಟ್ರಲ್‌ ನಿಲ್ದಾಣದಿಂದ ವಿಶೇಷ ರೈಲು ಹೊರತು ಇತರ ರೈಲುಗಳ ಸಂಚಾರ ಇಲ್ಲದಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ಗೆ ಬೋಗಿಯನ್ನು ತಂದು ಅಲ್ಲಿಂದ ಸಂಜೆ ಕುಂಭಕೋಣಂಗೆ ಕಳುಹಿಸಲಾಯಿತು. ಶೋರ್ನೂರು, ಈರೋಡ್‌ ಮೂಲಕ ಈ ಅಡಿಕೆ ಕುಂಭಕೋಣಂಗೆ ತಲುಪಲಿದೆ. ಮೊದಲಿಗೆ ಎ. 28ರಂದು ಕುಂಭಕೋಣಂಗೆ ಅಡಿಕೆಯನ್ನು ರೈಲಿನಲ್ಲಿ ಸಾಗಿಸಲಾಗಿತ್ತು.

ಕೊಂಕಣ ರೈಲ್ವೇಯಲ್ಲೂ ಸಿದ್ಧತೆ
ಕೊಂಕಣ ರೈಲ್ವೇ ಮೂಲಕ ಗುಜರಾತ್‌ ಸೇರಿದಂತೆ ವಿವಿಧೆಡೆ ಅಡಿಕೆಯನ್ನು ಸಾಗಿಸುವ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಕುರಿತು ಇತ್ತೀಚೆಗೆ ಪುತ್ತೂರು ಎಪಿಎಂಸಿಯಲ್ಲಿ ಶಾಸಕರು, ವರ್ತಕರು ಹಾಗೂ ಜನಪ್ರತಿನಿಧಿಗಳು ಹಾಗೂ ಕೊಂಕಣ ರೈಲ್ವೇಯ ಅಧಿಕಾರಿಗಳನ್ನು ಒಳಗೊಂಡ ಸಭೆ ಜರಗಿದೆ. ರೈಲಿನಲ್ಲಿ ಸಾಗಿಸಿದರೆ 3 ದಿನಗಳೊಳಗೆ ಗುಜರಾತ್‌ ತಲುಪಲು ಸಾಧ್ಯ. ಪ್ರಸ್ತುತ ಗೋವಾ ಬಳಿ ಸುರಂಗ ಮಾರ್ಗ ದುರಸ್ತಿ ಕಾರ್ಯ ನಡೆಯುತ್ತಿದ್ದು ಮುಕ್ತಾಯಗೊಂಡ ಬಳಿಕ ರೈಲಿನಲ್ಲಿ ಅಡಿಕೆ ಸಾಗಾಟ ಆರಂಭಗೊಳ್ಳುವ ನಿರೀಕ್ಷೆ ಇದೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಗೂಡ್ಸ್‌ ರೈಲು ಬೋಗಿಗೆ ಅಡಿಕೆ ಚೀಲಗಳ ಲೋಡಿಂಗ್‌ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next