Advertisement

ಕನಕಪುರದಲ್ಲಿ ಜೆಡಿಎಸ್‌ ಮುಖಂಡನ ಭೀಕರ ಹತ್ಯೆ

06:05 AM Nov 13, 2018 | Team Udayavani |

ಕನಕಪುರ: ಜೆಡಿಎಸ್‌ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಮುಸ್ಲಿಂಬ್ಲಾಕ್‌ನಲ್ಲಿ ನಡೆದಿದೆ.

Advertisement

ಮೃತನನ್ನು ಕನಕಪುರ ನಗರದ ರಾಜಗೋಪಾಲ(45) ಎಂದು ಗುರುತಿಸಲಾಗಿದ್ದು, ಈತ ಸೋಮವಾರ ಸಂಜೆ ಎಂದಿನಂತೆ ನಗರದ ಮುಸ್ಲಿಂಬ್ಲಾಕ್‌ ನಲ್ಲಿದ್ದ ಟೀ ಅಂಗಡಿ ಬಳಿ ಸ್ನೇಹಿತರ ಜತೆ ಇದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸOಉಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಇಬ್ಬರಿಂದ ಮೂರು ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಶೋಧ ಕಾರ್ಯ ಆರಂಭಿಸಿದ್ದು,ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳ ಶೋಧನೆಯಲ್ಲಿ ತೊಡಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next