Advertisement

ಜೆಡಿಎಸ್‌ ಕಾರ್ಯಕರ್ತನ ಕೊಲೆ

07:20 AM Apr 28, 2018 | Team Udayavani |

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಕಾವು ಏರತೊಡಗಿದಂತೆ, ಜಿಲ್ಲೆಯಲ್ಲಿ ರಾಜಕೀಯ ಹಿಂಸಾಚಾರದಿಂದಾಗಿ ಜೆಡಿಎಸ್‌ ಕಾರ್ಯಕರ್ತರೊಬ್ಬರ ಕೊಲೆ ನಡೆದಿದೆ. 

Advertisement

ಜಿಲ್ಲೆಯ ಗೌರಿಬಿದನೂರಿನ ಕೋಟಾಲದಿನ್ನೆಯ ಬಳಿ ಇರುವ ಬಾರ್‌ವೊಂದರಲ್ಲಿ ಗುರುವಾರ ತಡರಾತ್ರಿ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ (27) ಎಂಬಾತನನ್ನು ಕಾಂಗ್ರೆಸ್‌ ಬೆಂಬಲಿತ ರೌಡಿ ಶೀಟರ್‌ ರಮೇಶ್‌ ಹಾಗೂ ಆತನ ಬೆಂಬಲಿಗರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.
 
ರಾಮರೆಡ್ಡಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್‌, ತನ್ನ ಸಹಚರರೊಂದಿಗೆ ಹತ್ಯೆ ಮಾಡಿದ್ದಾನೆ. ದುರದೃಷ್ಟವೆಂದರೆ, ಮೇ 6ಕ್ಕೆ ರಾಮರೆಡ್ಡಿ ಮದುವೆ ನಡೆಯಬೇಕಿತ್ತು. ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಆಗಮಿಸಿ, ರಾಮರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಘಟನೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next