Advertisement

ಕಂದನನ್ನು ನೇಣಿಗೇರಿಸಿ ತಾಯಿಯೂ ಆತ್ಮಹತ್ಯೆ

11:28 AM Nov 10, 2017 | Team Udayavani |

ಹುಣಸೂರು: ತನ್ನ ಪುಟ್ಟಕಂದಮ್ಮನ್ನು ನೇಣಿಗೇರಿಸಿ ಅದೇ ಹಗ್ಗದಿಂದ ತಾಯಿಯೂ ನೇಣಿಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರಿನಲ್ಲಿ ಗುರುವಾರ ನಡೆದಿದೆ. ತಾಲೂಕಿನ ಹನಗೋಡು ಹೋಬಳಿ ಮುದಗನೂರಿನ ಪ್ರಶಾಂತ್‌ ಎಂಬುವವರ ಪತ್ನಿ ಕುಸುಮಾ (28), 1 ವರ್ಷದ ಪುತ್ರ ಪೃಥ್ವಿಕ್‌ಗೌಡ ನೇಣಿಗೆ ಶರಣಾದವರು.

Advertisement

 ಕುಸುಮಾ ಕೊಳವಿಗೆ ಆಶ್ರಮ ಶಾಲೆಯಲ್ಲಿ ಗುತ್ತಿಗೆ ಶಿಕ್ಷಕಿಯಾಗಿದ್ದರು. ಆದರೆ, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುಸುಮಾರ ಸಹೋದರ ಅನುಮಾನಾಸ್ಪದ ಸಾವು ಕುರಿತು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವಿವರ: ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಹಳ್ಳಿಯ ಲೇ.ವೆಂಕಟೇಶರ ಪುತ್ರಿ ಕುಸುಮಾರನ್ನು 2 ವರ್ಷಗಳ ಹಿಂದೆ ಮುದಗನೂರಿನ ಪ್ರಶಾಂತನಿಗೆ ಮದುವೆ ಮಾಡಿಕೊಡಲಾಗಿತ್ತು. ಕುಟುಂಬ ಅನ್ಯೋನ್ಯವಾಗಿತ್ತು. ಆದರೆ, ಕುಸುಮಾ ಮಗುವಿನೊಂದಿಗೆ ಆಗಾಗ್ಗೆ ಮನೆ ಬಿಟ್ಟು ಹೋಗುವುದು-ಬರುವುದು ಮಾಡುತ್ತಿದ್ದರು.

ಮಂಗಳವಾರವೂ ಇದೇ ರೀತಿ ಮನೆಯಿಂದ ಹೊರ ಹೋಗಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. ಸಂಜೆ ಪತ್ತೆ ಮಾಡಿ ಮನೆಗೆ ಕರೆತರಲಾಗಿತ್ತು. ಈಕೆ, ಎಂದಿನಂತೆ ಮನೆಯಲ್ಲಿ ಗುರುವಾರ ಸಹ ಬೆಳಗಿನ ತಿಂಡಿ-ಕಾಫಿ ಮಾಡಿಕೊಟ್ಟಿದ್ದರು.

ಆನಂತರ ಮಗುವಿನೊಂದಿಗೆ ಸ್ನಾನಕ್ಕೆ ಹೋದಾಕೆ ಬಹಳ ಹೊತ್ತಾದರೂ ಬಾರದಿದ್ದರಿಂದ ಕುಟುಂಬದವರೇ ಬಾಗಿಲನ್ನು ಒಡೆದು ನೋಡಿದಾಗ ಮಗುವಿನೊಂದಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ವಿಷಯ ತಿಳಿದ ಗ್ರಾಮಸ್ಥರು ಕುಸುಮಾ ಕುಟುಂಬಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಸಿಪಿಐ ಪೂವಯ್ಯ, ಪಿಎಸ್‌ಐ ಪುಟ್ಟಸ್ವಾಮಿ, ತಹಶೀಲ್ದಾರ್‌ ಮೋಹನ್‌ ಪರಿಶೀಲನೆ ನಡೆಸಿದರು. ಈ ವೇಳೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next