Advertisement

ನಿರ್ಮಾಣ ಹಂತದ ಆರೈಕೆ ಕೇಂದ್ರಕ್ಕೆ ಸಚಿವ ಭೇಟಿ

06:16 AM Jul 07, 2020 | Lakshmi GovindaRaj |

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೋವಿಡ್‌ 19 ಸೋಂಕಿತರ ಆರೈಕೆಗಾಗಿ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಬೃಹತ್‌ ಆರೈಕೆ ಕೇಂದ್ರಕ್ಕೆ ಸೋಮವಾರ ಶಿಕ್ಷಣ ಸಚಿವ  ಸುರೇಶ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಸರ್ಕಾರ ನಿರ್ಮಿಸುತ್ತಿರುವ 10,100 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ ಭರದಿಂದ ಸಾಗುತ್ತಿದೆ. ಈ ಕಾರ್ಯದ ಜವಾಬ್ದಾರಿ ಹೊತ್ತಿರುವ ಕಾರ್ಯ  ಪಡೆಯ ಅಧಿಕಾರಿಗಳಾದ  ರಾಜೇಂದ್ರ ಕಟಾರಿಯ, ಸಫ್ರಾಜ್‌ ಖಾನ್‌ ಮೊದಲಾದವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಬಹಳ ರಭಸದಿಂದ ಕಾರ್ಯ ಸಾಗಿದೆ. ವ್ಯವಸ್ಥೆಯೂ ಬಹಳ ಅಚ್ಚುಕಟ್ಟಾಗಿ ಯೋಜಿಸಲಾಗಿದೆ. ಇಡೀ ದೇಶದಲ್ಲಿಯೇ ಅತಿ ದೊಡ್ಡ ಆಸ್ಪತ್ರೆ  ಇದಾಗಲಿದೆ ಎಂದರು.

ಇಎಸ್‌ಐ ಕೋವಿಡ್‌ ಆಸ್ಪತ್ರೆಗೆ ಭೇಟಿ: ರಾಜಾಜಿನಗರದ ಎಸ್‌ಐ ಕೊವೀಡ್‌ ಆಸ್ಪತ್ರೆಗೆ ಭೇಟಿದ ಅವರು, ಮುಖ್ಯಾಧಿಕಾರಿಗಳಾದ ಡಾ. ಇಮಿ¤  ಯಾಜ ಆಲೀ, ಆಸ್ಪತ್ರೆಯ ಡೀನ್‌ ಡಾ.ಜಿತೇಂದ್ರ ನಾಯಕ್‌, ನೋಡಲ್‌  ವೈದ್ಯ ಡಾ.ಸತ್ಯನಾರಾಯಣ್‌ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಇವರೆಗೆ ಇಲ್ಲಿನ ಕೋವಿಡ್‌ ಫೀವರ್‌ ಕ್ಲಿನಿಕ್‌ ನಲ್ಲಿ 26,911 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜೂನ್‌ 29ನಂತರ ದಾಖಲಾದ 144 ಕೋವಿಡ್‌ ಪಾಸಿಟಿವ್‌ ಪ್ರಕರಣಗಳಲ್ಲಿ 33  ಮಂದಿ ಗುಣಮುಖರಾಗಿದ್ದಾರೆ. 75 ಹಾಸಿಗೆ ವ್ಯವಸೆಯಿದ್ದು, ಇದರಲ್ಲಿ 15 ಐಸಿಯು ಹಾಸಿಗೆ ಹಾಗೂ 10 ವೆಂಟಿಲೇಟರ್‌ ಇದೆ. ಅನುಭವಿ ವೈದ್ಯರಿದ್ದು, ರೋಗಿಗಳ ಆರೈಕೆಯು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next