Advertisement

Thekkatte: ಚರಂಡಿಗೆ ಇಳಿದ ಲಾರಿ!

08:38 PM Jul 20, 2024 | Team Udayavani |

ತೆಕ್ಕಟ್ಟೆ: ಬಿದ್ಕಲ್‌ಕಟ್ಟೆ ರಾಜ್ಯ ಹೆದ್ದಾರಿಯ ಮಾವಿನಕಟ್ಟೆ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಸಮೀಪದ ತಿರುವಿನಲ್ಲಿ ಶನಿವಾರ ಸಂಜೆ 16 ಚಕ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಳೆನೀರು ಹರಿಯುವ ಚರಂಡಿಗೆ ಇಳಿದಿದೆ.

Advertisement

ಲಾರಿಯಲ್ಲಿ ಬಳ್ಳಾರಿಯಿಂದ ಬ್ರಹ್ಮಾವರಕ್ಕೆ ಸಿಮೆಂಟ್‌ ಸಾಗಿಸಲಾಗುತ್ತಿತ್ತು. ಎದುರಿನಿಂದ ಬಂದ ವಾಹನಕ್ಕೆ ಅವಕಾಶ ಕಲ್ಪಿಸುವಾಗ ಚಾಲಕನ ನಿಯಂತ್ರಣ ತಪ್ಪಿತು ಎಂದು ಹೇಳಲಾಗಿದೆ. ಲಾರಿಗೆ ಅಲ್ಪ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next