Advertisement

ಆರೋಪ ಮಾಡುವವರ ಬಾಯಿಗೆ ಬಿದ್ದಿದೆ ಬೀಗ

11:21 PM Oct 05, 2019 | Lakshmi GovindaRaju |

ಬಳ್ಳಾರಿ: ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ 1,200 ಕೋಟಿ ರೂ.ಗಳನ್ನು ಬಿಡುಗಡೆಗೊಳಿ ಸುವ ಮೂಲಕ ಆರೋಪಿಸುವವರ ಬಾಯಿಗೆ ಬೀಗ ಹಾಕಿದಂತಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತರಿಗೆ ಕೇಂದ್ರ ಪರಿಹಾರ ಹಣ ಬಿಡುಗಡೆ ಗೊಳಿಸುವಲ್ಲಿ ತಡವಾಗಿತ್ತು. ಹೀಗಾಗಿ, ನಾನೂ ಸಹ ಕೆಲವೆಡೆ ಕ್ಷಮೆ ಯಾಚಿಸಿ ದ್ದೇನೆ. ಅದರ ಪರಿಣಾಮವೋ ಗೊತ್ತಿಲ್ಲ. ಕ್ಷಮೆಯಾಚಿಸಿದ ಎರಡ್ಮೂರು ತಾಸುಗಳಲ್ಲಿ ಕೇಂದ್ರ 1,200 ಕೋಟಿ ರೂ.ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ ಎಂದರು.

ಕಾಂಗ್ರೆಸ್‌ನವರು ಅಧಿಕಾರ ಕಳೆದು ಕೊಂಡು ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ವಿನಾಕಾರಣ ಆರೋಪಿಸುವ ಕೆಲಸ ಮಾಡುತ್ತಿದ್ದು, ಅವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನಾವೆಲ್ಲರೂ ಸೇರಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next