Advertisement

ಸಮಾಜಕ್ಕೆ ಜೀವನ ಸವೆಸಿದ್ದರು ಇಂಗಿನಶೆಟ್ಟಿ

02:25 PM Dec 22, 2021 | Team Udayavani |

ಶಹಾಬಾದ: ಸಮಾಜದ ಏಳ್ಗೆಗಾಗಿ ತ್ಯಾಗ ಮಯಿ ಜೀವನ ಸವೆಸಿದ ತ್ಯಾಗವೀರ ಸಂತೋಷ ಇಂಗಿನಶೆಟ್ಟಿ ಅವರ ತ್ಯಾಗ ಸ್ಮರಣಾರ್ಹವಾದದ್ದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Advertisement

ದಿ.ಸಂತೋಷ ಇಂಗಿನಶೆಟ್ಟಿ ಗೆಳೆಯರ ಬಳಗದ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ತಾವು ಬದುಕುವುದರೊಂದಿಗೆ ಸಮಾಜದಲ್ಲಿರುವ ಹಲವಾರು ಸಂಘ, ಸಂಸ್ಥೆಗಳಿಗೆ, ಉದಯೋನ್ಮುಖ ಬರಹಗಾರರಿಗೆ, ಕವಿಗಳಿಗೆ ಹಾಗೂ ಕಷ್ಟದಲ್ಲಿರುವ ಜನರಿಗೆ ದಾನಿಗಳಾಗಿ, ಸಮಾಜಮುಖೀಯಾಗಿ ಬದುಕಿನ ಸಾರ್ಥಕ ಜೀವನ ನಡೆಸಿದವರು ಅವರು ಎಂದರು.

ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲಪುರಕರ್‌, ಅಣವೀರ ಇಂಗಿನಶೆಟ್ಟಿ, ಡಾ|ರಶೀದ್‌ ಮರ್ಚಂಟ್‌, ದಿಲೀಪ ನಾಯಕ, ನಿಂಗಣ್ಣ ಹುಳಗೋಳಕರ್‌, ಅಣ್ಣಪ್ಪ ದಸ್ತಾಪುರ, ನಾಗರಾಜ ಮೇಲಗಿರಿ, ಡಿ.ಸಿ.ಹೊಸಮನಿ, ಸೂರ್ಯಕಾಂತ ಕೋಬಾಳ, ಡಾ| ಅಹ್ಮದ್‌ ಪಟೇಲ, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ, ವಿರೇಶ ಬಂದಳ್ಳಿ, ರಾಜೇಶ ಯನಗುಂಟಿಕರ್‌, ಮೀರ ಅಲಿ ನಾಗೂರೆ, ಕಿರಣ ಚವ್ಹಾಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next