Advertisement

ಕಿರಿಕಿರಿ ಎನ್ನುತ್ತಾ ಆಟವಾಡುತ್ತಿದ್ದ ಮಕ್ಕಳಿಗೇ ಚೂರಿಯಿಂದ ಇರಿದ

11:02 PM May 05, 2019 | Lakshmi GovindaRaj |

ಮಂಗಳೂರು: ಕಿರಿಕಿರಿಯಾಗುತ್ತಿದೆ ಎಂದು ಆಟವಾಡುತ್ತಿದ್ದ ಮಕ್ಕಳಿಗೆ ನೆರಮನೆಯ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ಶನಿವಾರ ನಡೆದಿದೆ.

Advertisement

ಆರೋಪಿ, ಶಕ್ತಿನಗರ ನಿವಾಸಿ ದೇವರಾಜು ಅಲಿಯಾಸ್‌ ಅಣ್ಣು (40) ಎಂಬಾ ತನನ್ನು ಪೊಲೀ ಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಹಾರ್ದಿಕ್‌ (4) ಮತ್ತು ಚಿರಾಗ್‌ (9) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣವೇನು?: ಶಾಲೆಗೆ ರಜೆಯಿರುವ ಕಾರಣ ಸಹೋದರರಾದ ಹಾರ್ದಿಕ್‌ ಮತ್ತು ಚಿರಾಗ್‌, ತಮ್ಮ ಸ್ನೇಹಿ ತ ರೊಂದಿಗೆ ಶನಿವಾರ ಮಧ್ಯಾಹ್ನ ಮನೆಯ ಎದುರು ಆಟವಾಡುತ್ತಿದ್ದರು. “ನೀವಿಲ್ಲಿ ಆಟವಾಡುತ್ತಿದ್ದರೆ ನನಗೆ ಕಿರಿಕಿರಿಯಾಗುತ್ತಿದೆ’ ಎಂದು ಕೂಗುತ್ತಾ ಬಂದ ದೇವರಾಜು, ಕೈಯಲ್ಲಿ ಚೂರಿ ಹಿಡಿದುಕೊಂಡು ಮಕ್ಕಳ ಮೇಲೆ ಹಲ್ಲೆಗೆ ಮುಂದಾದ.

ಆತ ಚೂರಿ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದ ಕೆಲವು ಮಕ್ಕಳು ಓಡಿ ಹೋದರು. ಆದರೆ, ಹಾರ್ದಿಕ್‌ ಮತ್ತು ಚಿರಾಗ್‌ ಈತನ ಕೈಗೆ ಸಿಕ್ಕಿಹಾಕಿಕೊಂಡರು. ಕೋಪದಿಂದ ಆತ ಚೂರಿಯಿಂದ ಮಕ್ಕಳಿಗೆ ಇರಿದಿದ್ದು, ಅವರ ಕೈ, ತಲೆ ಹಾಗೂ ಮುಖಕ್ಕೆ ಗಾಯವಾಗಿದೆ.

ಮಕ್ಕಳ ಬೊಬ್ಬೆ ಕೇಳಿ ಓಡಿ ಬಂದ ಪೋಷಕರು ಹಾಗೂ ಸ್ಥಳೀಯರು, ಕೂಡಲೇ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿ ದೆ. ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು, ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next