Advertisement

ಕಾಂಗ್ರೆಸ್ ವಿರೋಧದ ಕಾರಣ ಜೆಡಿಎಸ್ ಪಕ್ಷವು ಬಿಜೆಪಿಗೆ ಸ್ವಾಭಾವಿಕ ಮಿತ್ರಪಕ್ಷ: ಶೆಟ್ಟರ್

02:29 PM Dec 06, 2020 | keerthan |

ಹುಬ್ಬಳ್ಳಿ: ಕಾಂಗ್ರೆಸ್ ವಿರೋಧಿ ಭಾವನೆಯಿಂದಲೇ ಅಸ್ತಿತ್ವಕ್ಕೆ ಬಂದ ಜೆಡಿಎಸ್ ಪಕ್ಷವು ಬಿಜೆಪಿಗೆ ಸ್ವಾಭಾವಿಕ ಮಿತ್ರಪಕ್ಷ ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅರಿತುಕೊಂಡರೆ ಒಳಿತು ಎಂದು ಸಚಿವ ಜಗದೀಶ ಶೆಟ್ಟರ ಅಭಿಪ್ರಾಯ ಪಟ್ಟರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮಿತ್ರ ಪಕ್ಷಗಳಿಗೆ ಮೋಸ ಮಾಡುತ್ತ ಬಂದಿದೆ ಎನ್ನುವುದು ಈಗಲಾದರೂ ಕುಮಾರಸ್ವಾಮಿ ಅವರಿಗೆ ಅರ್ಥವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಯಾರ ಜತೆ ಮೈತ್ರಿ ಎಂಬುದನ್ನು ಅವರು ಯೋಚಿಸಲಿ. ಒಂದಂತು ಸ್ಪಷ್ಟ ಜೆಡಿಎಸ್, ಕಾಂಗ್ರೆಸ್ ವಿರೋಧಿ ಬಣವಾಗಿಯೇ ಅಸ್ತಿತ್ವಕ್ಕೆ ಬಂದಿದೆ ಎಂದು ನುಡಿದರು.

ವಿಧಾನಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತವಳಿ ನೋಟಿಸ್ ನೀಡಿದ್ದೇವೆ. ಜೆಡಿಎಸ್ ಬೆಂಬಲ ಇದ್ದರೆ ಮಾತ್ರ ಇದು ಸಾಧ್ತವಾಗಲಿದೆ. ಬೆಂಬಲ ಬಗ್ಗೆ ಜೆಡಿಎಸ್ ನಿರ್ಧಾರ ಇನ್ನು ಸ್ಪಷ್ಟವಾಗಬೇಕಾಗಿದೆ ಎಂದರು.

ಸಂಪುಟ ವಿಸ್ತರಣೆ, ಪಕ್ಷದ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯಧ್ಯಕ್ಷರು ಸೂಚಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next