Advertisement

ಚಾ.ದೇಗುಲದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ

01:10 PM Dec 11, 2021 | Team Udayavani |

ನಂಜನಗೂಡು: ಇಲ್ಲಿನ ಕಪಿಲಾ ನದಿ ತೀರದಲ್ಲಿರುವ ಚಾಮುಂಡೇಶ್ವರಿ ದೇಗುಲದಲ್ಲಿ ಅನಂತ ಬಾಲಕೃಷ್ಣ ವಿಗ್ರಹ ಸೇರಿದಂತೆ 200 ನಾಗರ ವಿಗ್ರಹಗಳ ಪುನರ್‌ ಪ್ರತಿಷ್ಠಾಪನೆ ನಡೆಯಿತು.

Advertisement

ಶ್ರೀಕಂಠೇಶ್ವರಸ್ವಾಮಿ ದೇಗುಲದ ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದ ಅರ್ಚಕ ವೃಂದದವರು ಕಳೆದ ಮೂರು ದಿನಗಳ ಪರ್ಯಂತ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಂಡು ಅನಂತ ಬಾಲಕೃಷ್ಣನ ವಿಗ್ರಹ ಸೇರಿದಂತೆ 200ಕ್ಕೂ ಹೆಚ್ಚು ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.

ಪ್ರತಿಷ್ಠಾಪನೆಗೂ ಮುನ್ನ ಗಣಪತಿ ನವಗ್ರಹ ಹೋಮ ನೆರವೇರಿಸಿ ವಿಗ್ರಹಗಳ ಕಲಾಪೂರ್ಣ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಾಡಿ ಸಂಧಾನ, ಪೂರ್ಣಹುಟ್ಟು, ಕುಂಭಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕೈಂಕರ್ಯಗಳ ನಂತರ ಅನಂತ ಬಾಲಕೃಷ್ಣನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಶ್ರೀಕಂಠೇಶ್ವರಸ್ವಾಮಿ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಎಇಒ ವೆಂಕಟೇಶ್‌ಪ್ರಸಾದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next