Advertisement

ರೈತರ ಗದ್ದೆಗೆ ನುಗ್ಗಿದ ಅಪಾರ ನೀರು-ಆತಂಕ

01:20 PM Feb 05, 2022 | Team Udayavani |

ಗಂಗಾವತಿ: ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯ 22ನೇ ವಿತರಣಾ ಕಾಲುವೆ ಹತ್ತಿರ ಶುಕ್ರವಾರ ಸಂಜೆ ಬೃಹತ್‌ ಗಾತ್ರದ ಎರಡು ಬೋಂಗಾ ಬಿದ್ದಿದ್ದು ಅಪಾರ ಪ್ರಮಾಣದ ನೀರು ಕಾಲುವೆ ಮೂಲಕ ರೈತರ ಗದ್ದೆಗೆ ನುಗ್ಗಿದೆ.

Advertisement

ಇದರಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಆತಂಕಕ್ಕೊಳಗಾಗಿದ್ದಾರೆ. ಗಂಗಾವತಿ, ಕಾರಟಗಿ ಸಿಂಧನೂರು ಭಾಗದಲ್ಲಿ ಭತ್ತದ ಸಸಿ ನಾಟಿ ಮಾಡಿದ್ದು ಮಾನ್ವಿ, ಮಸ್ಕಿ, ರಾಯಚೂರು ಕೊನೆ ಭಾಗದ ರೈತರು ಇದೀಗ ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಈ ಮಧ್ಯೆ ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಿಂದ 22ನೇ ವಿತರಣಾ ಕಾಲುವೆಗೆ ನೀರು ಹರಿಯುವ ಸ್ಥಳದಲ್ಲಿ ಎಡ-ಬಲ ಭಾಗದಲ್ಲಿ ಬೃಹತ್‌ ಗಾತ್ರದ ಬೋಂಗಾ ಬಿದ್ದಿದ್ದು, ದೊಡ್ಡದಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ವಿತರಣಾ ಕಾಲುವೆ ಮೂಲಕ ರೈತರ ನಾಟಿ ಮಾಡಿದ ಭತ್ತದ ಗದ್ದೆಗೆ ನುಗ್ಗುತ್ತಿದ್ದು, ಅಪಾರ ಹಾನಿಯಾಗುವ ಸಂಭವವಿದೆ.

ಎಸ್ಕೇಪ್‌ ಮೂಲಕ ನೀರು

ಬೋಂಗಾದಲ್ಲಿ ನೀರು ಹರಿಯುವುದನ್ನು ತಡೆಯಲು ಸಿದ್ದಿಕೇರಿ ಹತ್ತಿರ ಇರುವ ಎಸ್ಕೇಪ್‌ ತೆರೆದು ದುರುಗಮ್ಮನಹಳ್ಳಕ್ಕೆ ಬಿಡಲು ನಿರ್ಧರಿಸಿದ್ದು, ಸ್ಥಳಕ್ಕೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.

ಶಾಸಕರ ಭೇಟಿ

Advertisement

ಬೋಂಗಾ ಬಿದ್ದಿರುವ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಶಾಸಕ ಪರಣ್ಣ, ಈಗಾಗಲೇ ಮೇಲ್ಭಾಗದ ರೈತರು ಭತ್ತ ನಾಟಿ ಮಾಡಿದ್ದಾರೆ. ಕೆಳಮಟ್ಟದ ರೈತರು ಇನ್ನೂ ನಾಟಿ ಕಾರ್ಯ ಮಾಡುತ್ತಿದ್ದು, ಬೇಗ ದುರಸ್ತಿ ಮಾಡುವಂತೆ ಸ್ಥಳದಲ್ಲಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರೈತರು ಆತಂಕಕ್ಕೊಳಗಾಗಬಾರದು. ಬೇಗ ದುರಸ್ತಿ ಕಾರ್ಯ ಮಾಡಿ ಪುನಃ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next