Advertisement

ಮಹಾತ್ಮರ ಆದರ್ಶ ಪಾಲಿಸಿ

12:48 PM Jan 23, 2022 | Team Udayavani |

ರಟ್ಟಿಹಳ್ಳಿ: ನಿಜಶರಣ ಅಂಬಿಗರ ಚೌಡಯ್ಯನವರು ಇಂದಿನ ಅನೇಕ ಯುವಕರಿಗೆ ದಾರಿದೀಪ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ತಹಶೀಲ್ದಾರ್‌ ಅರುಣಕುಮಾರ ಕಾರ್ಗಿ ಹೇಳಿದರು.

Advertisement

ರಟ್ಟಿàಹಳ್ಳಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶರಣರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಿರಬಾರದು. ಅವರ ವಿಚಾರಧಾರೆ, ಆದರ್ಶ ತತ್ವಗಳು ನಮಗೆ ದಾರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.

ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ಚಂದ್ರಶೇಖರ ಜಾಡರ ಮಾತನಾಡಿದರು. ಉಪಾಧ್ಯಕ್ಷ ರಂಗನಾಥ ರಟ್ಟಿàಹಳ್ಳಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಸಿಂಪಿಗೇರ ಮಾತನಾಡಿದರು. ಗಂಗಾಮತ ಸಮಾಜದ ಮುಖಂಡರಾದ ಗದಿಗೆಪ್ಪ ಜಾಡರ್‌, ಮಂಜುನಾಥ ನಾಗವಂದ, ವೀರಭದ್ರ ಸುಣಗಾರ, ಶಶಿ ಸುಣಗಾರ, ಸುನೀಲ ಸುಣಗಾರ, ಬಸವರಾಜ ಸಣ್ಣಕ್ಕಿ, ಗಣೇಶ ಸೊಪ್ಪಿನವರ, ರಂಗಪ್ಪ ಸುಣಗಾರ, ರವಿ ಸುಣಗಾರ, ನಾಗರಾಜ ಸುಣಗಾರ, ಮರಿಯಪ್ಪ ಬಾರ್ಕಿ, ಚಂದ್ರು ಜಾಡರ್‌ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next