Advertisement

Bengaluru: ಸ್ಮಶಾನಕ್ಕೆ ಕರೆದೊಯ್ದು ಪತ್ನಿಯ ಕೊಲೆಗೈದ ಪತಿ!

01:39 PM Aug 15, 2024 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತಿಯೇ ಚಾಕುವಿನಿಂದ ಪತ್ನಿಯನ್ನು ಕೊಲೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯ ಜಟ್ಟಿಗನಹಳ್ಳಿ ಸ್ಮಶಾನದ ಖಾಲಿ ಜಾಗದಲ್ಲಿ ನಡೆದಿದೆ.

Advertisement

ಜಟ್ಟಿಗನಹಳ್ಳಿ ನಿವಾಸಿ ಗೌರಿ (30) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ನಾಗೇಶ್‌ (35) ಎಂಬಾತನನ್ನು ಬಂಧಿಸಲಾಗಿದೆ.

ಮದ್ಯದ ಅಮಲಿನಲ್ಲಿ ದಂಪತಿ ಗಲಾಟೆ ಮಾಡಿಕೊಂಡಿದ್ದು, ಅದು ವಿಕೋಪಕ್ಕೆ ಹೋದಾಗ, ದುರ್ಘ‌ಟನೆ ನಡೆದಿದೆ. ಬೆಂಜಮೀನ್‌ ಎಂಬು ವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ದೂರುದಾರ ಬೆಂಜಮೀನ್‌ ಬುಧವಾರ ಬೆಳಗ್ಗೆ 10.30ರ ವೇಳೆ ಬನಶಂಕರಿ 6 ನೇ ಹಂತದ 10 ನೇ ಬ್ಲಾಕ್‌, ಜಟ್ಟಿಗನಹಳ್ಳಿ ಸ್ಮಶಾನದ ಖಾಲಿ ಜಾಗದ ಬಳಿ ಬಹಿರ್ದೆಸೆಗೆ ಹೋಗಿದ್ದಾಗ ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದರು. ಕುತ್ತಿಗೆಗೆ ಚಾಕುವಿನಿಂದ ಚುಚ್ಚಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮೃತ ಮಹಿಳೆ ಹೆಸರು ಗೌರಿ ಮತ್ತು ಈಕೆಯ ಪತಿ ನಾಗೇಶ್‌ ಎಂಬುದು ಗೊತ್ತಾಗಿದೆ.

7-8 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು. ಆಗಾಗ ಜಗಳ ಮಾಡುತ್ತಿದ್ದರು. ನಾಗೇಶ್‌ ಗೌರಿಯನ್ನು ಸುಮಾರು ಐದಾರು ವರ್ಷಗಳ ಕಾಲ ಬೇರೆ ಊರಿನಲ್ಲಿ ಬಿಟ್ಟಿದ್ದ. ಕಳೆದ 3 ದಿನಗಳ ಹಿಂದಷ್ಟೇ ಗೌರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಮತ್ತೆ ಅವರಿಬ್ಬರು ಮಂಗಳವಾರ ಸಂಜೆ ಜಗಳ ಮಾಡಿಕೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ನಾಗೇಶ್‌, ಪತ್ನಿ ಗೌರಿಯನ್ನು ಸಶ್ಮಾನದ ರಸ್ತೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next