Advertisement

ಹಾಡಹಗಲೇ ಮನೆ ಬೀಗ ಮುಡಿದು ದರೋಡೆ

12:15 AM Apr 03, 2019 | Team Udayavani |

ಕೆ.ಆರ್‌.ಪುರ: ಹಾಡಹಗಲೇ ದುಷ್ಕರ್ಮಿಗಳು ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕೆಆರ್‌ ಪುರ ಠಾಣೆ ವ್ಯಾಪ್ತಿಯ ದೇವಸಂದ್ರದ ಟೆಂಟ್‌ ರಸ್ತೆ ಸಮೀಪವಿರುವ ಜಯರಾಮರೆಡ್ಡಿ ಬಡಾವಣೆಯಲ್ಲಿ ನಡೆದಿದೆ.

Advertisement

ಕೆಆರ್‌ ಪುರದ ಟೆಂಟ್‌ ರಸ್ತೆ ಬಳಿಯಿರುವ ಜಯರಾಮರೆಡ್ಡಿ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿರುವ ಖಾಸಗಿ ಶಾಲೆಯ ಶಿಕ್ಷಕಿ ಮಾದವಿ ಎಂಬುವವರ ಮನೆಯಲ್ಲಿ ಮದ್ಯಾಹ್ನ 1 ಗಂಟೆ ಸುಮಾರಿನಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಒಳಪ್ರವೇಶಿಸಿದ,

-ದುಷ್ಕರ್ಮಿಗಳು ತಂಡ ಮನೆಯ ಬೀಗ ಒಡೆದು ತೀಜೋರಿಯಲ್ಲಿದ್ದ, ಬರೋಬ್ಬರಿ 7ಲಕ್ಷದ ಮೌಲ್ಯದ ಚಿನ್ನಾಭರಣ ಹಾಗೂ 60 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೆಆರ್‌ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next