Advertisement

ಮನೆಯು ಮನೆಯಲ್ಲ ಮನಮನಕೆ ಹಿಡಿವ ಕನ್ನಡಿ…

02:14 PM Oct 09, 2017 | |

ಮನೆಯೊಳಗಿನ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ  ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ.  ಭಾರತೀಯ ಪರಂಪರೆ ಎಲ್ಲಾ ವಿಚಾರಗಳಲ್ಲೂ ಅನುಭವ ಪೂರ್ಣ ಸಾದೃಶ್ಯ ಅಂತರ್ಗತ ರಸೋತ್ಪತ್ತಿಯ ಕುರಿತು ವ್ಯಾಖ್ಯಾನಿಸುತ್ತದೆ.

Advertisement

ಮನೆಯ ವ್ಯಾಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮನೆಯನ್ನು ಪರಿಣಾಮದ ದೃಷ್ಟಿಯಿಂದ ಉದಾಹರಿಸಬಹುದು. ಉಳಿಯಲೊಂದು ಮನೆ ಎಂಬುದು ಸರಿ. ಆದರೆ ಮನೆಯೊಳಗಿನ ಮನಸ್ಸುಗಳು ಅಧೈರ್ಯ, ಅನುಮಾನ, ಅಸ್ವಾಸ್ಥ್ಯಗಳೊಂದಿಗೆ ಕೂಡಿರಬಾರದು. ಮನೆಯೇ ಮೊದಲ ಪಾಠಶಾಲೆ ಎಂಬ ವಿಚಾರವನ್ನು ಇಲ್ಲೀಗ ವ್ಯಾಖ್ಯಾನಿಸಿ ನೋಡಬಹುದು. ಜನನಿ ತಾನೆ ಮೊದಲ
ಗುರು ಎಂಬ ಕವಿವಾಣಿ ಸರಿ. ಆದರೆ ಜನನಿಯೋರ್ವಳೇ ಅಲ್ಲ, ಉತ್ತಮ ಸಂಸ್ಕಾರಕ್ಕೆ ಮನೆಯ ಪ್ರತಿ ವ್ಯಕ್ತಿಯೂ ತನ್ನ ವೈಯುಕ್ತಿಕ ನೆಲೆಯಲ್ಲಿ ಶ್ರೇಷ್ಠವಾದ ಪಾಠವನ್ನು ಮನೆಯ ಸಹನಿವಾಸಿಗೆ ಕೊಡುತ್ತಲೇ ಇರುವುದು ಗಮನಾರ್ಹ ಅಂಶವಾಗಿದೆ. ಜೊತೆಗೆ ಮನೆಗೆ ಭೇಟಿ ಕೊಡುವ ಅತಿಥಿಗಳ ಗುಂಪು ಕೂಡಾ ಅನೇಕವನ್ನು ಅನುಭವಗಳ ನೆಲೆಯಲ್ಲಿ ಒದಗಿಸುತ್ತದೆ. ಈ ಗುಂಪು ತಾನೂ ಸುಕೃತಕ್ಕೆ ಸಂಬಂಧಿಸಿದ ದಿವ್ಯಗಳನ್ನು ಒಂದು ಮನೆಯೊಳಗಿಂದ ಅನುಭವದ ಕೊಡದಂತೆ ಹೊತ್ತೂಯ್ಯುತ್ತದೆ. 

ಎಲ್ಲರಿಗೂ ತಿಳಿದಂತೆ ಈಶಾನ್ಯ ದಿಕ್ಕಿನಿಂದಲೇ ಮನೆಯ ಅಡಿಗಲ್ಲನ್ನು ಇಡುವ ಶುಭಕಾರ್ಯ ನೆರವೇರಬೇಕಾದುದು ಮುಖ್ಯವೆಂಬುದು ಸರಿ. ಈ ಶುಭ ವಿಚಾರವನ್ನು ಪೂರ್ಣಗೊಳಿಸುವ ವ್ಯಕ್ತಿ ಈ ಅಡಿಗಲ್ಲನ್ನು ಇಡುವ ಕ್ರಿಯೆ ಪೂರ್ವವನ್ನು ದಿಟ್ಟಿಸಿಕೊಂಡು ಪೂರೈಸಲ್ಪಡಬೇಕು. ನವರತ್ನಗಳನ್ನು, ಅಡಿಗಲ್ಲನ್ನು ಜೋಡಿಸುವ ಸಂದರ್ಭದಲ್ಲಿ ಭೂವಲಯದಲ್ಲಿ ಇರಿಸಬೇಕು. ಶಕ್ತಾನುಸಾರವಾಗಿ
ನವರತ್ನಗಳ ಬೆಲೆ ಇರಲಿ. ಅನಾವಶ್ಯಕವಾದ ದುಂದು ವೆಚ್ಚಗಳನ್ನು ಈ ಕುರಿತು ಮಾಡಬೇಡಿ. ನವರತ್ನಗಳ ಶೋಭೆ ಮಣ್ಣ ತಳಹದಿಯಿಂದ ಉಕ್ಕುವ ಸ್ಪಂದನಗಳಿಂದಾಗಿ ಮನೆಯ ನಿವಾಸಿ ಅತಿಥಿ ಪ್ರತಿ ಜೀವಿಗೂ ಸಕಾರಾತ್ಮಕವಾದ ಮನೋಬಲವನ್ನು ಅವರವರಿಗೆ ತಕ್ಕಂತೆ ಮಾಡಿಸುತ್ತದೆ. ಈ ನವರತ್ನಗಳು ಕೆಂಪು, ಹಳದಿ, ನೀಲಿ, ಕೇಸರ ಗೋಮೇಧ, ನಭ ಗರ್ಭ ಬಣ್ಣಗಳು ತಂತಮ್ಮ
ದಿವ್ಯತೆಯನ್ನು ಜಿನುಗಿಸುತ್ತದೆ. ಮನಸ್ಸಿನ ತರಂಗಗಳ ಹದಪೂರ್ಣ ಸುತ್ತಾಟ ಪ್ರವಾಹಗಳೆಲ್ಲ ಒಂದು ಹದವನ್ನು ಭರಿಸಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿನ ಮನಮನಕ್ಕೆ ಮನೆ ದರ್ಪಣ ಹಿಡಿದು ಪ್ರತಿಯೋರ್ವನನ್ನೂ ಪ್ರತಿಫ‌ಲಿಸುತ್ತಲೇ ಇರುತ್ತದೆ.

ಮನೆಯೊಳಗಿನ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ. ಭಾರತೀಯ ಪರಂಪರೆ ಎಲ್ಲಾ ವಿಚಾರಗಳಲ್ಲೂ ಅನುಭವ ಪೂರ್ಣ ಸಾದೃಶ್ಯ ಅಂತರ್ಗತ ರಸೋತ್ಪತ್ತಿಯ ಕುರಿತು ವ್ಯಾಖ್ಯಾನಿಸುತ್ತದೆ. ಮಂತ್ರಗಳ ಪಠಣವೇ ಒಂದು ತೆರನಾದ ಶಬ್ದಾತೀತ ಅನುಭವವನ್ನು ನಮ್ಮೊಳಗೆ ದ್ರವಿಸುತ್ತದೆ.  ಮಂತ್ರಗಳೊಳಗಿನ ಅರ್ಥ ಇಷ್ಟೇನೇ ಎಂಬುದು ಅನೇಕರು ಮೂಗು ಮುರಿಯುವ ಕ್ರಿಯೆ
ಮಾಡಿಕೊಳ್ಳುತ್ತಾರೆ. ಆದರೆ ಲಯಬದ್ಧ ಅಕ್ಷರದ ಹರಿದಾಟಗಳು ಒಂದು ಅನೂಹ್ಯ ಪರಿಣಾಮವನ್ನು ಮನದ ಅಂಗಳದ ಭಾವ ಶುದ್ದಿ ಮೇಲೆ ಹಿತ ಒದಗಿಸುತ್ತವೆ. ಈ ಸ್ಪರ್ಶದ ಅನುಭವ ಜನ್ಯವಾಗಿ ಒಂದು ಮಿಡಿತದ ರಿಂಗಣ ದಿಗಣಗಳೇ ರಸೋತ್ಪತ್ತಿ ಎಂದು ಕರೆಯಲ್ಪಡುತ್ತದೆ. ಈ ನೆಲೆಯಲ್ಲಿಯೇ ಯೋಚಿಸಿ ಮನೆಯ ಒಳಾಂಗಣದ ಸರಳ ಸುಸಜ್ಜಿತ ಅಂಶಗಳು ಸಾಂದ್ರಗೊಳ್ಳುವಂತಿರಲಿ. 
ಈ ಸಾಂದ್ರತೆಯಿಂದಾಗಿ ಸಾಂಖ್ಯ ಯೋಗ, ನ್ಯಾಯ ವೈವೇಷಿಕ ಮೀಮಾಂಸಾ ವೇದಾಂತ ಎಂಬ ಷಡªರ್ಶನಗಳು
ಪ್ರಾಪ್ತಗೊಳ್ಳುತ್ತವೆ. ಪಂಡಿತನಿಂದ ಪಾಮರನವರೆಗೂ ಅವರವರ ಬುದ್ಧಿ ಶಕ್ತಿಯ ಮೇಲಿಂದ ಮನೆಯೊಳಗಿನ ಬಣ್ಣ ಚಿತ್ರ ಅಲಂಕೃತ ಚಿತ್ರಗಳು ಈ ಷಡರ್ಶನವನ್ನು ನೀಡುತ್ತಿರುತ್ತದೆ. ಗುರು ಬ್ರಹ್ಮಾ, ಗುರು ವಿಷ್ಣು , ಗುರುರ್‌ ದೇವೋ ಮಹೇಶ್ವರಃ ಗುರುರ್‌ ಸಾûಾತ್‌ ಪರಬ್ರಹ್ಮ ತಸೆ ಶ್ರೀ ಗುರವೇ ನಮಃ ಎಂಬ ಮಂತ್ರವನ್ನ ಗಮನಿಸಿ. ಲಯ ಹಾಗೂ ಸ್ವರಬದ್ಧವಾಗಿ ಈ ಮಂತ್ರ ಪಠಿಸಿದಾಗ ಮನಸ್ಸಿನ ಕಿರಿಕಿರಿಗಳಲ್ಲ ಒಂದೇ ಕ್ಷಣದಲ್ಲಿ ನಾಶವಾಗಿ ಹೊಸ ಚೇತನ ಒದಗುತ್ತದೆ. ಪಂಡಿತನು ಊಹಿಸುವ ಗುರುವಿನ ಎತ್ತರ ಬೇರೆ. ಪಾಮರನ ಅಳತೆಯೇ ಬೇರೆ. ಆದರೆ ಪರಿಣಾಮ ಅಗಾಧ. ಹೀಗೆ ಮನೆ ಕೇವಲ ಮನೆಯಲ್ಲ ಮನವ ಮೀಟುವ ವೀಣಾಮಣಿ.

ಮೊ: 8147824707

Advertisement

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next