Advertisement

Mahatma Gandhi; ಕರಾವಳಿಯಲ್ಲಿ ಸ್ವಚ್ಛ ನಗರ-ಗ್ರಾಮದ ಮಹಾ ಸಂಕಲ್ಪ

12:52 AM Sep 19, 2023 | Team Udayavani |

ಮಂಗಳೂರು: ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ ಕರಾವಳಿಯ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಸ್ವಚ್ಛತ ಆಂದೋಲನ ಸದ್ದಿಲ್ಲದೆ ನಡೆಯುತ್ತಿದ್ದು,ಅ. 2ರ ವರೆಗೆ ಜಾರಿಯಲ್ಲಿ ಇರಲಿದೆ.

Advertisement

ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ ಮಟ್ಟದಲ್ಲಿ ಸ್ವಚ್ಛತ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ. ಸೆ. 15ರಿಂದ ಅ. 2ರ ವರೆಗೆ ಪ್ರತೀ ಜಿಲ್ಲೆಯಲ್ಲಿ “ಸ್ವಚ್ಛತೆಯೇ ಸೇವೆ’ ಎಂಬ ಹೆಸರಿನ ವಿಶೇಷ ಆಂದೋಲನವಿದು.

“ಕಸಮುಕ್ತ, ತ್ಯಾಜ್ಯಮುಕ್ತ ಭಾರತ’ ಎಂಬ ಘೋಷವಾಕ್ಯ ಇದ್ದು ಎಲ್ಲೆಡೆ ಸ್ವಚ್ಛತೆ ಸಾಧಿಸಿ ಸ್ವಚ್ಛ ಸುಂದರ, ಸದೃಢ ಗ್ರಾಮ-ನಗರವನ್ನು ರೂಪಿಸಲು ಪ್ರಯತ್ನ ನಡೆಯುತ್ತಿದೆಎಲ್ಲ ಕಡೆಗಳಲ್ಲಿ ಹೆಚ್ಚು ಜನಜಂಗುಳಿ ಇರುವ ಸ್ಥಳ ಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸಮುದ್ರ ತೀರ ಪ್ರದೇಶ, ನದಿ ತೀರ, ಸಾಂಸ್ಥಿಕ-ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ-ಶ್ರಮದಾನ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಕಸ ಬೀಳುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗುತ್ತದೆ.

ವಿವಿಧೆಡೆ ಶ್ರಮದಾನ
ಸ್ಥಳೀಯ ಸಂಸ್ಥೆ- ಪಂಚಾಯತ್‌ ವ್ಯಾಪ್ತಿಯಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛನಗರ-ಗ್ರಾಮದ ಸಂಕಲ್ಪ ತೊಡಲಾಗಿದೆ.

“ಅಂಗನವಾಡಿ, ಆಸ್ಪತ್ರೆ, ಅಂಗಡಿ ಪ್ರದೇಶಗಳು, ಸರಕಾರಿ, ಸಮುದಾಯಾಧಾರಿತ ಕಟ್ಟಡಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ, ಎಲ್ಲೆಂದರಲ್ಲಿ ಉಗುಳುವುದು ಕಡಿಮೆ ಮಾಡಲು ಸ್ವಚ್ಛತಾ ಪ್ರತಿಜ್ಞೆ, ಬಟ್ಟೆ ಚೀಲ ಬಳಸಲು ಪ್ರೇರಣೆ ನೀಡುವುದು. ಶಾಲಾ ಕಾಲೇಜುಗಳಲ್ಲಿ ನೈರ್ಮಲ್ಯ ಗುಂಪು ರಚನೆ, ಮನೆಗಳಲ್ಲಿ ಹೆಚ್ಚು ಪ್ಲಾಸ್ಟಿಕ್‌ ವಸ್ತು ಸಂಗ್ರಹ ಮಾಡುವವರಿಗೆ ವಿಶೇಷ ಪ್ರೋತ್ಸಾಹ, ನೈರ್ಮಲ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರನ್ನು ಗೌರವಿಸುವುದು ಸಹಿತ ಹಲವು ಕ್ರಮಗಳ ಮೂಲಕ ಸ್ವಚ್ಛತ ಆಂದೋಲನ ನಡೆಸಲಾಗುತ್ತಿದೆ’ ಎಂದು ಜಿ.ಪಂ.ಸಿಇಒ ಡಾ| ಆನಂದ್‌ ಕೆ. ತಿಳಿಸಿದ್ದಾರೆ.

Advertisement

“ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮೊದಲಿಗೆ ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ಆಂದೋಲನ ಶುರು ಮಾಡಲಾಗಿದೆ. ಎಲ್ಲ ಕಡೆಗಳಲ್ಲಿಯೂ ಫಾಗಿಂಗ್‌ ನಡೆಸಲಾಗುತ್ತಿದೆ’ ಎನ್ನುತ್ತಾರೆ ಮಂಗಳೂರು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌.

ಆಂದೋಲನ ಸ್ವರೂಪ
-ಸ್ವಚ್ಛತೆಗಾಗಿ ಪ್ರತ್ಯೇಕ ಶ್ರಮದಾನ
-ಕಸ ಎಸೆಯುವ ಸ್ಥಳಗಳ ಸ್ವಚ್ಛತೆ-ಅರಿವು ಮೂಡಿಸುವುದು
-ನದಿ-ಸಮುದ್ರ ಸಹಿತ ಜಲಮೂಲದ ಸಮೀಪದ ಪ್ರದೇಶ ಸ್ವಚ್ಛತೆ
-ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿ
-ರಸ್ತೆ ಬದಿ ತ್ಯಾಜ್ಯ ಎಸೆಯುವವರಿಗೆ ದಂಡ ಹಾಗೂ ಜಾಗೃತಿ
-ಅ. 2ರಂದು ವಿಶೇಷ ಗ್ರಾಮ ಸಭೆ
-ಸ್ವಚ್ಛ ಪರಿಸರಕ್ಕಾಗಿ ಶಾಲಾ ಮಕ್ಕಳ ಜಾಥಾ, ಜಾಗೃತಿ ಕಾರ್ಯಕ್ರಮ

ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತ ಅಭಿಯಾನ ಕೈಗೊಳ್ಳುವಂತೆ ಸರಕಾರದಿಂದ ಬಂದ ನಿರ್ದೇಶನದ ಪ್ರಕಾರ ಅ. 2ರ ವರೆಗೆ ಸ್ವತ್ಛತ ಆಂದೋಲನ ಆಯೋಜಿಸಲಾಗಿದೆ. ಸ್ವಚ್ಛತೆಯೇ ಸೇವೆ ಎಂಬ ಆಶಯದಂತೆ ಎಲ್ಲ ಕಡೆಗಳಲ್ಲಿ ಈ ಆಂದೋಲನ ವಿವಿಧ ಸ್ತರದಲ್ಲಿ ಆಯೋಜನೆಗೊಂಡಿದೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next