Advertisement

ಹುತಾತ್ಮ ಯೋಧ ರಾಹುಲ್‌ ಅಂತ್ಯಕ್ರಿಯೆ

12:05 AM Nov 10, 2019 | Lakshmi GovindaRaju |

ಬೆಳಗಾವಿ: ಜಮ್ಮುವಿನ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿಯಲ್ಲಿ ಉಗ್ರರೊಂದಿಗೆ ಸೆಣಸಾಡುವ ವೇಳೆ ಗುಂಡಿನ ಕಾಳಗದಲ್ಲಿ ಗುರುವಾರ ಮಧ್ಯರಾತ್ರಿ ಹುತಾತ್ಮನಾದ ವೀರ ಯೋಧ ರಾಹುಲ್‌ ಭೈರು ಸುಳಗೇಕರ (22) ಅವರ ಅಂತ್ಯಕ್ರಿಯೆ ಸ್ವಗ್ರಾಮ ಉಚಗಾಂವದಲ್ಲಿ ಶನಿವಾರ ಸರ್ಕಾರಿ ಗೌರವ ಮತ್ತು ಮರಾಠಾ ಸಮುದಾಯದ ವಿಧಿವಿಧಾನಗಳೊಂದಿಗೆ ನಡೆಯಿತು.

Advertisement

ಇದಕ್ಕೂ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರಕ್ಕೆ ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಗೌರವ ನಮನ ಸಲ್ಲಿಸಿದರು. ಬಳಿಕ, ಮರಾಠಾ ಲಘು ಪದಾತಿ ದಳ ಕೇಂದ್ರ (ಎಂಎಲ್‌ಐಆರ್‌ಸಿ)ಕ್ಕೆ ಒಯ್ದು ಗೌರವ ಸಲ್ಲಿಸಲಾಯಿತು. ಅಲ್ಲಿಂದ ನೂರಾರು ಯುವಕರ ಬೈಕ್‌ ರ್ಯಾಲಿಯಲ್ಲಿ ಜಯಘೋಷಗಳೊಂದಿಗೆ ಸ್ವಗ್ರಾಮ ಉಚಗಾಂವಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು “ಅಮರ್‌ ರಹೇ ರಾಹುಲ್‌’ ಎಂಬ ಜೈಕಾರ ಹಾಕಿದರು. ದಾರಿಯುದ್ದಕ್ಕೂ ಜನರು ಹೂಹಾರ ಹಾಕಿ, ಗೌರವ ಸಲ್ಲಿಸಿದರು.

ಪಾರ್ಥಿವ ಶರೀರವನ್ನು ಮನೆಗೆ ಒಯ್ದಾಗ ತಂದೆ-ತಾಯಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ರಾಹುಲ್‌ನ ಹಿರಿಯ ಸಹೋದರ ಮಯೂರ್‌ ಭಾರತೀಯ ಸೈನ್ಯದಲ್ಲಿದ್ದು, ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಮರಾಠಾ ಲಘು ಪದಾತಿ ದಳದ ಬ್ರಿಗೇಡಿಯರ್‌ ಗೋವಿಂದ ಕಾಲವಾಡ, ಯೋಧನ ತಂದೆ-ತಾಯಿಗೆ ತಿರಂಗಾ ಧ್ವಜವನ್ನು ಹಸ್ತಾಂತರಿಸಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಚಿವ ಜಗದೀಶ ಶೆಟ್ಟರ, ಶಾಸಕರಾದ ಲಕ್ಷ್ಮೀ ಹೆಬ್ಟಾಳಕರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next