Advertisement

ವೀರಶೈವ ಸಂಪ್ರದಾಯದಂತೆ ಕೋ.ಚೆನ್ನಬಸಪ್ಪ ಅಂತ್ಯಕ್ರಿಯೆ

11:33 PM Feb 24, 2019 | Team Udayavani |

ಬೆಂಗಳೂರು: ವಯೋ ಸಹಜ ಸಮಸ್ಯೆಯಿಂದ ನಿಧನರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ನಾಡೋಜ ಕೋ.ಚೆನ್ನಬಸಪ್ಪ ಅವರ ಅಂತ್ಯಕ್ರಿಯೆ ಭಾನುವಾರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ನೆರವೇರಿತು. ಮಧ್ಯಾಹ್ನ 2.30ರ ವೇಳೆ ನಡೆದ ಅಂತ್ಯಕ್ರಿಯೆಯ ಅಂತಿಮ ವಿಧಿ-ವಿಧಾನದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕವಿ ಸಿದಟಛಿಲಿಂಗಯ್ಯ, ಡಾ.ಮರುಳಸಿದಟಛಿಪ್ಪ ಸೇರಿ ಕನ್ನಡ ಸಾರಸ್ವತ ಲೋಕದ ಗಣ್ಯರು ಪಾಲ್ಗೊಂಡಿದ್ದರು.

Advertisement

ಇದಕ್ಕೂ ಮೊದಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಆಲ್‌ ಇಂಡಿಯಾ ಮುಸ್ಲಿಂ ಕೌನ್ಸಿಲ್‌ನ ಅಧ್ಯಕ್ಷ ಶμàವುಲ್ಲಾ, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ನ್ಯಾಯಮೂರ್ತಿ ಸುಜಾತಾ, ಮಾಜಿ ಸಂಸದ ನಾರಾಯಣಸ್ವಾಮಿ, ಹಿರಿಯ ಪೊಲೀಸ್‌ ಅಧಿಕಾರಿ ರವಿಕಾಂತೇಗೌಡ ಸೇರಿದಂತೆ ಹಲವು ಗಣ್ಯರು ಕೋ.ಚೆನ್ನಬಸಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ
ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next