Advertisement

ಮಾರ್ಚ್‌ ಅಂತ್ಯಕ್ಕೆ ಚತುಷ್ಪಥ ರಸ್ತೆ ಪೂರ್ಣ

01:22 PM Feb 14, 2023 | Team Udayavani |

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಕಾಮಗಾರಿ ಸಕಲೇಶಪುರ ಹಾಸನದವರೆಗೆ ಬಹುತೇಕವಾಗಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಆದರೆ, ಬೈಪಾಸ್‌ ರಸ್ತೆ ಕಾಮಗಾರಿ ಮುಗಿಯುವುದು ಸದ್ಯಕ್ಕೆ ಅನು ಮಾನವಾಗಿರುವುದರಿಂದ ಪಟ್ಟ ಣದ ಜನತೆ ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತರಾಗುವುದು ಅನುಮಾನವಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಿಂದಾಗಿ ನರಕವಾಗಿದ್ದ ಸಕಲೇಶಪುರ-ಹಾಸನದ ನಡುವಿನ ಸಂಚಾರ ಸತತ ಆರು ವರ್ಷಗಳ ನಂತರ ಸುಗುಮವಾಗುವ ಹಂತ ತಲುಪಿದೆ. ಹಾಸನದ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗದ್ದೆ ಗ್ರಾಮದ ಹೊರವಲಯದವರಗಿನ 45 ಕಿ.ಮಿ ರಸ್ತೆ ಚತುಷ್ಪಥಕ್ಕೆ 2016ರಲ್ಲಿ ಟೆಂಡರ್‌ ಕರೆಯಲಾಗಿದೆ. 2019ರ ಏಪ್ರಿಲ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್‌ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 45 ಕಿ.ಮೀ. ರಸ್ತೆಗಾಗಿ ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂ ಕುಸಿತಕ್ಕೆ ಕಾರಣವಾಗಿತ್ತು.

ಇನ್ನೂ ಐಸೋಲೆಕ್ಸ್‌ ಕಂಪನಿ ದಿವಾಳಿಯಾಗಿದ್ದರಿಂದ ಐಸೋಲೆಕ್ಸ್‌ ಕಂಪನಿಯಿಂದ ಉಪಗುತ್ತಿಗೆ ಪಡೆದ ರಾಜ್‌ಕಮಲ್‌ ಕಂಪನಿ ಕಳೆದ 5 ವರ್ಷಗಳಿಂದ ಕಾಮಗಾರಿಯನ್ನು ಆಮೆ ಗತಿಯಲ್ಲಿ ನಡೆಸುತ್ತಿದೆ. ಇದೀಗ ಹಾಸನ ಸಕಲೇಶಪುರ ನಡುವೆ ಕಾಮಗಾರಿ ಬಹುತೇಕವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ.

ಬೈಪಾಸ್‌ ರಸ್ತೆ ಕಾಮಗಾರಿ ಇನ್ನೂ ವಿಳಂಬ: ಬೈಪಾಸ್‌ ರಸ್ತೆಯಲ್ಲಿ ಬಹುತೇಕ ಕಾಂಕ್ರೀಟಿಕರಣ ಮುಗಿದಿದೆ. ಆದರೆ, ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒಂದು ಮೇಲ್ಸು ತುವೆ, ಒಂದು ಅಂಡರ್‌ ಪಾಸ್‌ ಹಾಗೂ ಹೇಮಾವತಿ ನದಿಗೆ ಸೇತುವೆ ನಿರ್ಮಾಣವಾಗಬೇಕಾಗಿದ್ದು, ಈ ಕಾಮ ಗಾರಿಗಳು ಸದ್ಯಕ್ಕೆ ಮುಗಿಯು ವುದು ಅನುಮಾನವಾಗಿದೆ. ಇದರಿಂದಾಗಿ ಪಟ್ಟಣದ ಜನತೆ ಟ್ರಾμಕ್‌ ಕಿರಿ ಕಿರಿಯಿಂದ ಮುಕ್ತಾಯಗೊಳ್ಳುವುದು ಅನುಮಾನವಾಗಿದೆ.

ಟ್ರಾಫಿಕ್‌ ಕಿರಿಕಿರಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ದಿನ ನಿತ್ಯ 10000ಕ್ಕೂ ಹೆಚ್ಚು ವಾಹನಗಳು ಸಂಚರಿಸುವು ದರಿಂದ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಸಮಸ್ಯೆಯನ್ನು ಜನಪ್ರತಿನಿಧಿಗಳು ಬಗೆಹರಿಸದ ಕಾರಣ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಇದೀಗ ಬೈಪಾಸ್‌ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದ ಪಟ್ಟಣದ ಜನ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಗಿದೆ. ಹಾಸನ ದಿಂದ ಸಕಲೇಶಪುರಕ್ಕೆ 40 ನಿಮಿಷಕ್ಕೆ ಬಂದರೆ, ಸಕಲೇಶಪುರ ಪಟ್ಟಣದ ಬಾಳೆ ಗದ್ದೆಯಿಂದ ಆನೆಮಹಲ್‌ ದಾಟಲು 30 ನಿಮಿಷಕ್ಕೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿದೆ. ಇದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸುವ ವರು ಸಹ ಟ್ರಾಫಿಕ್‌ ಕಿರಿಕಿರಿಗೆ ಸಿಕ್ಕಿ ಹಾಕಿಕೊಳ್ಳು ವಂತಾಗಿದೆ. ಅದರಲ್ಲೂ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳು, ಪ್ರತಿಭಟನೆ ಕಾರ್ಯಕ್ರಮಗಳು, ರಾಜಕೀಯ ಪಕ್ಷ ಗಳ ಕಾರ್ಯಕ್ರಮಗಳ ವೇಳೆ ಅಪಾರ ಜನ ಸೇರುವುದರಿಂದ ಟ್ರಾಫಿಕ್ ಅವ್ಯವಸ್ಥೆ ಆಗಾಗ ಕಂಡು ಬರು ತ್ತಲೆ ಇರುತ್ತದೆ.

Advertisement

ಮಾರ್ಚ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣ : ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್‌ ಕಂಪನಿ ನೀಡಿರುವ ಗುತ್ತಿಗೆ ಅವಧಿ 2023 ಮಾರ್ಚ್‌ ಅಂತ್ಯಕ್ಕೆ ಕೊನೆಗಾಣಲಿರುವುದರಿಂದ ಕನಿಷ್ಠ ಸಕಲೇಶಪುರದವರಗೆ ಚತುಷ್ಪಥ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಂಡಿರುವ ಕಂಪನಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೂ ಸಹ ಕೌಡಹಳ್ಳಿ ಸಮೀಪ ಹೇಮಾವತಿ ನದಿಗೆ ಸೇತುವೆ ನಿರ್ಮಾಣ ಹಾಗೂ ಹಾಲೇಬೇಲೂರು ಪಟ್ಟಣ ಸಂಪರ್ಕಿಸುವ ರಸ್ತೆ ಅಂಡರ್‌ ಪಾಸ್‌ ಹಾಗೂ ಕೊಲ್ಲಹಳ್ಳಿ ಮೇಲ್ಸುತವೆ ಕಾಮಗಾರಿ ಸದ್ಯಕ್ಕೆ ಮುಗಿಯುವುದು ಅನುಮಾನವಾಗಿದೆ.

ಮಂಗಳೂರು ಬೆಂಗಳೂರು ನಡುವೆ ಸರಕು ಸಾಗಾಣೆಗಾಗಿ ಸಂಚರಿಸುವ 10 ಚಕ್ರದ ಲಾರಿಗಳು, ಟ್ಯಾಂಕರ್‌ ಗಳಿಂದ ಹಿಡಿದು ಇತರ ಟ್ರಕ್‌ಗಳು, ಕಾರುಗಳು, ದ್ವಿಚಕ್ರವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಪಟ್ಟಣದ ಮುಖಾಂತರವೇ ತಿರುಗಾಡಬೇಕಾಗಿರುವುದರಿಂದ ಜನಸಾಮಾನ್ಯರು ಟ್ರಾಫಿಕ್‌ಗೆ ಹಿಡಿಶಾಪ ಹಾಕುವುದು ಕಂಡು ಬರುತ್ತಿದೆ.

ಸಕಲೇಶಪುರದಿಂದ ಮಾರನಹಳ್ಳಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆ ಪಡೆದಿರುವ ರಾಜ್‌ಕಮಲ್‌ ಕಂಪನಿ ಕಾಮಗಾರಿ ಕಳೆದ 6 ವರ್ಷಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದು ಈ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿರವರ ಗಮನಕ್ಕೆ ತರಲಾಗಿದೆ. – ಎಚ್‌.ಕೆ ಕುಮಾರಸ್ವಾಮಿ, ಶಾಸಕ

ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ಆಟೋ ಚಾಲಕರು ತೊಂದರೆ ಅನು ಭವಿಸುವಂತಾಗಿದೆ. ಈ ಹಿನ್ನೆಲೆ ಬೈಪಾಸ್‌ ರಸ್ತೆ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು. – ರವಿ, ಆಟೋಚಾಲಕ

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next