Advertisement

ರೇಷ್ಮೆಯಲ್ಲಿ ಕೋಲಾರ ಜಿಲ್ಲೆಗೆ ರಾಜ್ಯದಲ್ಲೇ ಮೊದಲ ಸ್ಥಾನ

06:20 AM Sep 18, 2018 | Team Udayavani |

ಕೋಲಾರ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಕೋಲಾರ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ.

Advertisement

ಜಿಲ್ಲೆಯಲ್ಲಿ 26,127 ವಿವಿಧ ರೇಷ್ಮೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, 56.96 ಕೋಟಿ ರೂ. ವೆಚ್ಚ ಮಾಡಿ 1,56,090 ಮಾನವ ದಿನಗಳನ್ನು ಸೃಷ್ಟಿಸಿರುವುದರಿಂದ ರಾಜ್ಯದಲ್ಲಿಯೇ ನಂ.1 ಸ್ಥಾನವನ್ನು ಸಂಪಾದಿಸುವಂತಾಗಿದೆ. 2018 ಏಪ್ರಿಲ್‌ವರೆಗೂ 2,469 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರಸಕ್ತ ಸಾಲಿಗೆ 552 ಕಾಮಗಾರಿಗಳು ಮಂಜೂರಾಗಿದ್ದವು. ಒಟ್ಟು 3021 ಕಾಮಗಾರಿಗಳು ಪ್ರಗತಿಯಲ್ಲಿದ್ದು, 487 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಜಿಲ್ಲೆಯಲ್ಲಿ 1.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿ1 ತಳಿಯ ರೇಷ್ಮೆ ಅಭಿವೃದ್ಧಿಪಡಿಸಲಾಗಿದೆ. 156 ಪಂಚಾಯ್ತಿ ವ್ಯಾಪ್ತಿಯ 1602 ಹಳ್ಳಿಗಳಲ್ಲಿ ರೇಷ್ಮೆ ಅವಲಂಬಿಸಲಾಗಿದೆ. ರೇಷ್ಮೆಯ ಅಭಿವೃದ್ಧಿಗಾಗಿ 16 ರೇಷ್ಮೆ ಸೇವಾ ಕೇಂದ್ರಗಳು, 3 ಬಿತ್ತನೆ ಕೋಠಿಗಳು, 3 ಸರಕಾರಿ ರೇಷ್ಮೆ ಮಾರುಕಟ್ಟೆಗಳು, 46 ನೋಂದಾಯಿತ ಬಿತ್ತನೆ ಕೋಠಿಗಳು, 40 ಚಾಕಿ ಸಾಕಾಣಿಕಾ ಕೇಂದ್ರಗಳು, 1 ರೀಲಿಂಗ್‌ ತಾಂತ್ರಿಕ ಸೇವಾಕೇಂದ್ರ, 1 ರೇಷ್ಮೆ ವಿನಿಯಮ ಕೇಂದ್ರ ಇದೆ.

Advertisement

Udayavani is now on Telegram. Click here to join our channel and stay updated with the latest news.

Next