Advertisement

ಮಗನ ಎದುರೇ ತಂದೆಗೆ ಹೃದಯಾಘಾತ

12:09 PM May 02, 2019 | Team Udayavani |

ಹುಳಿಯಾರು: ವಾಹನ ಚಲಾಯಿಸುತ್ತಿ ರುವಾಗಲೇ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ ದುರ್ಘ‌ಟನೆ ಹುಳಿಯಾರಿನ ಎಪಿಎಂಸಿ ಮುಂಭಾಗ ಬುಧವಾರ ಬೆಳಗ್ಗೆ ನಡೆದಿದೆ.

Advertisement

ಮೃತ ದುರ್ದೈವಿ ಚಾಲಕನನ್ನು ಶಿವಕುಮಾರ್‌ (35) ಎಂದು ಗುರುತಿಸ ಲಾಗಿದೆ. ಇವರು ಕೊರಟಗೆರೆ ತಾಲೂಕು ಅಲ್ಲಾಳಸಂದ್ರ ಗ್ರಾಮದವರಾಗಿದ್ದು, ತುಮಕೂರಿನಲ್ಲಿ ವಾಸವಾಗಿದ್ದರು. ಮೃತರು ಹುಳಿಯಾರಿನ ಕೆಲ ಅಂಗಡಿಗಳಿಗೆ ಮಿಕ್ಸಿಗಳನ್ನು ಕೊಡಲು ತಮ್ಮ ಟಾಟಾ ಏಸ್‌ ವಾಹನದಲ್ಲಿ ತುಂಬಿ ಕೊಂಡು ಬರುತ್ತಿರುವಾಗ ಎಪಿಎಂಸಿ ಬಳಿ ಇದ್ದಕ್ಕಿದ್ದ ಹಾಗೆ ಹೃದಯಾಘಾತ ವಾಗಿದೆ.

ತಂದೆ ಸ್ಟೇರಿಂಗ್‌ ಬಿಟ್ಟು ಸೀಟಿನ ಹಿಂಭಾಗಕ್ಕೆ ಪ್ರಜ್ಞೆತಪ್ಪಿ ಬಿದ್ದವರಂತೆ ಹೊರಗಿದ್ದನ್ನು ಕಂಡು, ಪಕ್ಕದಲ್ಲೇ ಕುಳಿತಿದ್ದ 8 ವರ್ಷದ ಮಗ ಪುನೀತ್‌ ಕುಮಾರ್‌ ತಕ್ಷಣ ಸ್ಟೇರಿಂಗ್‌ ಅನ್ನು ರಸ್ತೆಯಿಂದ ಪಕ್ಕದ ದಿಣ್ಣೆಯ ಕಡೆ ತಿರುಗಿಸಿ, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾನೆ.

ಇದ್ದಕ್ಕಿದ್ದ ಹಾಗೆ ವಾಹನ ರಸ್ತೆಯಿಂದ ದಿಣ್ಣೆಯಕಡೆ ಚಲಿಸಿದನ್ನು ಕಂಡ ಸ್ಥಳೀಯರು, ವಾಹನದ ಬಳಿ ಹೋಗಿ ನೋಡಲಾಗಿ ಮಗ ತಂದೆಯನ್ನು ಅಳುತ್ತಾ ಏಳಿಸುತ್ತಿದ್ದ ಮನಕಲಕುವ ದೃಶ್ಯ ಅಲ್ಲಿತ್ತು. ತಕ್ಷಣ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಚಾಲಕನನ್ನು ಕರೆತರ ಲಾಗಿತ್ತಾದರೂ ಇಲ್ಲಿ ವೈದ್ಯರಿಲ್ಲ, ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ದೃಢಪಡಿಸಿದರು.

ನಂತರ ಮೃತರ ಸಂಬಂಧಿಕರಿಗೆ ವಿಷಯ ಮುಟ್ಟಿಸಿ, ಮೃತ ದೇಹವನ್ನು ತುಮಕೂರಿಗೆ ಕಳುಹಿಸಿಕೊಡಲಾಯಿತು. ಹುಳಿಯಾರು ಪೊಲೀಸರು ಘಟನೆಯ ಮಾಹಿತಿ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next