Advertisement

ಭಾರತದಲ್ಲಿ ಬೇಕಿದೆ ರಚನಾತ್ಮಕ ಸುಧಾರಣೆ: ಗೀತಾ ಗೋಪಿನಾಥ್‌

09:54 AM Dec 18, 2019 | Hari Prasad |

ವಾಷಿಂಗ್ಟನ್‌: ದೇಶದ ಆರ್ಥಿಕತೆಯನ್ನು ಮೇಲೆತ್ತಲು ಬ್ಯಾಂಕಿಂಗ್‌ ಹಾಗೂ ಕಾರ್ಮಿಕ ವಲಯಲ್ಲಿ ಭಾರತ ರಚನಾತ್ಮಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಐಎಂಎಫ್ ಮುಖ್ಯಸ್ಥೆ ಗೀತಾ ಗೋಪಿನಾಥ್‌ ತಿಳಿಸಿದ್ದಾರೆ.

Advertisement

‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಆರು ವರ್ಷಗಳಲ್ಲೇ ದಾಖಲೆಯ ಕುಸಿತ ಕಂಡಿರುವ ಭಾರತದ ಅಭಿವೃದ್ಧಿ ದರ ಚೇತರಿಕೆಗೆ ದೇಶೀಯ ಉತ್ಪಾದನೆ ಕುಸಿತ ತಡೆಗೆ ಪ್ರೋತ್ಸಾಹಿಸಬೇಕಿದೆ. ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ.

ಬ್ಯಾಂಕ್‌ಗಳಿಗೆ ಹೊರೆಯಾಗಿರುವ ಅನುಪಯುಕ್ತ ಸಾಲದ ಪ್ರಮಾಣವನ್ನು ತಗ್ಗಿಸುವ ಅಗತ್ಯವಿದೆ. ಗ್ರಾಮೀಣ ಆರ್ಥಿಕತೆ, ಮೂಲಭೂತ ಸೌಲಭ್ಯ, ತೆರಿಗೆ ಸುಧಾರಣೆ, ಉದ್ಯಮ ಸ್ನೇಹಿ ಪಾಲಿಸಿಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next