Advertisement

ಬಣ್ಣಗಳ ಆಧಾರದ‌ಲ್ಲಿ ಪ್ರದೇಶ ವಿಂಗಡಣೆ

09:11 AM Apr 14, 2020 | Sriram |

ಹೊಸದಿಲ್ಲಿ : ಹೆಚ್ಚು ಕಡಿಮೆ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು, ಕೇಂದ್ರ ಸರಕಾರದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮುಂದಿನ ಈ ಲಾಕ್‌ಡೌನ್‌ ಅವಧಿ ಅತ್ಯಂತ ಪ್ರಮುಖವಾಗಿದೆ. ಈ ಸಮಯದಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಸೋಂಕು ಪೀಡಿತರ ಸಂಖ್ಯೆಯ ಆಧಾರದಲ್ಲಿ ದೇಶವನ್ನು ಕೆಂಪು, ಕಿತ್ತಳೆ ಮತ್ತು ಹಸಿರು ಎಂಬ ಮೂರು ವಲಯಗಳಾಗಿ ವಿಂಗಡಿಸಲು ಮುಂದಾಗಿದೆ.

Advertisement

ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡುವುದ ಕ್ಕಿಂತ ಸೋಂಕು ಹೆಚ್ಚಿರುವ ಕಡೆಗಳಲ್ಲಿ ಮಾತ್ರ ಕಠಿನ ನಿರ್ಬಂಧ ಹೇರುವುದು ಕೇಂದ್ರ ಸರಕಾರದ ಚಿಂತನೆ. ಸೋಂಕು ಕಾಣಿಸದ ಕಡೆಗಳಲ್ಲಿ ನಿಯಮಾವಳಿಗಳನ್ನು ಸ್ವಲ್ಪ ಸಡಿಲಗೊಳಿಸಿದರೆ ಆರ್ಥಿಕತೆ ಯನ್ನೂ ಕೊಂಚ ಮೇಲೆತ್ತಬಹುದು ಎಂಬ ಆಲೋಚನೆಯೂ ಇದರ ಹಿಂದಿದೆ. ಹೀಗಾಗಿ ಇಡೀ ದೇಶವನ್ನೇ ಮೂರು ವಲಯ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಈ ಮೂರು ವಲಯಗಳನ್ನು ಹೇಗೆ ವಿಂಗಡಿಸಲಾಗುತ್ತದೆ, ಈ ಬಣ್ಣಗಳು ಏನು ಹೇಳುತ್ತವೆ, ಯಾವ ಬಣ್ಣದ ವಲಯದಲ್ಲಿ ಏನೇನಿರುತ್ತದೆ, ಏನಿರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಕೆಂಪು ವಲಯ
ಅತಿ ಹೆಚ್ಚು ಕೋವಿಡ್‌-19 ಪಾಸಿಟಿವ್‌ ಪ್ರಕರಣ ಹೊಂದಿರುವ ಜಿಲ್ಲೆಗಳನ್ನು ಕೆಂಪು ವಲಯ (ರೆಡ್‌ ಝೋನ್‌) ಎಂದು ಗುರುತಿಸಲಾಗುತ್ತದೆ. ಇಂಥಲ್ಲಿ ಕಟ್ಟೆಚ್ಚರ ಜಾರಿಯಲ್ಲಿ ಇರಲಿದ್ದು, ಯಾವುದೇ ಕಾರಣಕ್ಕೂ ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಹಾಲು, ಔಷಧ ದಂತಹ ಅಗತ್ಯ ಸೇವೆಗಳು ಮಾತ್ರ ಸಿಗಬಹುದು.

ಕಿತ್ತಳೆ ವಲಯ
ಕೆಂಪು ವಲಯಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಪ್ರಕರಣಗಳಿರುವ ಮತ್ತು ಇತ್ತೀಚೆಗೆ ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಳ್ಳದೆ ಇರುವ ಜಿಲ್ಲೆಗಳನ್ನು ಕಿತ್ತಳೆ ವಲಯ (ಆರೆಂಜ್‌ ಝೋನ್‌) ಎಂದು ಗುರುತಿಸಲಾಗುತ್ತದೆ. ನಿಯಮಿತ ಜನಸಂಚಾರ ಮತ್ತು ಕೃಷಿ ಉತ್ಪನ್ನಗಳ ಕಟಾವಿನಂತಹ ಚಟುವಟಿಕೆ ಗಳಿಗೆ ಇಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

ಹಸಿರು ವಲಯ
ಕೋವಿಡ್‌-19 ವೈರಸ್‌ ಸೋಂಕಿನ ಒಂದೂ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳನ್ನು ಹಸಿರು ವಲಯ (ಗ್ರೀನ್‌ ಝೋನ್
) ಗಳು ಎಂಬುದಾಗಿ ಗುರುತಿಸಲಾಗುತ್ತದೆ. ಇಲ್ಲಿ ಬಹುತೇಕ ಅಗತ್ಯ ಸೇವೆಗಳು ಇರಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next