Advertisement

ಕೆರೆಯಲ್ಲಿ ಮುಳುಗಿ ಬಾಲಕರಿಬ್ಬರ ಸಾವು

07:45 AM Oct 12, 2017 | |

ಚಿಕ್ಕೋಡಿ: ನೀರಿನಲ್ಲಿ ಆಡುತ್ತಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇನಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಶ್ರೀನಾಥ ವಿನಾಯಕ ಬಾಚಲಕರ (3) ಮತ್ತು ಪ್ರಣವ ಪ್ರವೀಣ ಬಾಚಲಕರ (2) ಮೃತ ಬಾಲಕರು.

Advertisement

ಶ್ರೀನಾಥನ ತಂದೆ ಟಂಟಂ ವಾಹನ ಚಾಲಕರಾಗಿದ್ದು, ಪ್ರಣವನ ತಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಇವರಿಬ್ಬರೂ ಕೆಲಸಕ್ಕೆ ಹೋಗುವಾಗ ಮಕ್ಕಳೂ ಜೊತೆಗೆ ಬಂದಿದ್ದರು. ನಂತರ ಅಲ್ಲಿಂದ ಕೆರೆಗೆ ಸ್ನಾನ ಮಾಡಲು ಇಳಿದಾಗ ಮುಳುಗಿ ಮೃತಪಟ್ಟಿದ್ದಾರೆ. ಮನೆಯಿಂದ ಹೊರಗೆ ಹೋದ ಮಕ್ಕಳು ಇನ್ನೂ ಮನೆಗೆ ಬಂದಿಲ್ಲವೆಂದು ಪಾಲಕರು ಗ್ರಾಮದ ಸುತ್ತಮುತ್ತ ಹುಡುಕಾಡಿದರು. ನಂತರ ಕೆರೆ ಬಳಿ ಬಾಲಕರ ಬಟ್ಟೆಗಳು ಇರುವುದನ್ನು ಗಮನಿಸಿದ ಗ್ರಾಮಸ್ಥರು, ಕೆರೆಯಲ್ಲಿ ಇಳಿದು ನೋಡಿದಾಗ ಶವಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next