Advertisement

 ಹುಣಸೂರು:  ಸೋಲಾರ್ ಬೇಲಿಗೆ ಸಿಲುಕಿ ಆನೆ ಸಾವು

09:06 PM Sep 13, 2021 | Team Udayavani |

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಅಂಚಿನ ಕಾಫಿ ತೋಟದ ಸೋಲಾರ್ ಬೇಲಿಗೆ ಸಿಲುಕಿ ಸುಮಾರು 30-35 ವರ್ಷದ ಸಲಗವೊಂದು ಸಾವನ್ನಪ್ಪಿದೆ.

Advertisement

ನಾಗರಹೊಳೆ ಉದ್ಯಾನವನದ ಹುಣಸೂರು ವಲಯದ ದೊಡ್ಡ ಹರವೆ ಶಾಖೆ ಕಾವೇರಿ ಬ್ಲಾಕ್ ಅರಣ್ಯ ಪ್ರದೇಶದ ಕಾಡಂಚಿನ ಸನ್ನಿ ಜೋಸೆಫ್‌ರ ಪುತ್ರ ಜೈಸನ್ ಸನ್ನಿ ಎಂಬುವವರ ಕಾಫಿ ತೋಟದಲ್ಲಿ ಅಕ್ರಮವಾಗಿ ಅಳವಡಿಸಿದ್ದ ಸೋಲಾರ್ ಫೆನ್ಸಿಂಗ್‌ನ ವಿದ್ಯುತ್ ತಂತಿಗೆ ತಗುಲಿ ಆನೆ ಸಾವನ್ನಪ್ಪಿದೆ.

ವಿಷಯ ತಿಳಿದು ಸ್ಥಳಕ್ಕೆ ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ಆರ್.ಎಫ್.ಓ.ಹನುಮಂತರಾಜು, ಬೈಕುಪ್ಪೆ ಠಾಣೆಯ ವೃತ್ತ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್, ಚೆಸ್ಕಾಂನ ಎ.ಇ.ಇ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆ ಪಶುವೈದ್ಯ ಡಾ.ವಾಸಿಂ ಮಿರ್ಜಾ ಸಲಗದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಜಮೀನಿನ ಮಾಲಿಕ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅರೆಕಾಡು ಸಿದ್ದಾಪುರದ ಜೈಸನ್‌ಸನ್ನಿ ಹಾಗೂ ಮೇಲ್ವಿಚಾರಕ ಶೇಷಪ್ಪ ಹಾಗೂ ಸೋಮವಾರ ಪೇಟೆಯ ಅಬೇತ್‌ಮಂಗಲರ ವಿರುದ್ದ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next