Advertisement

ನಾಡಿದ್ದು ಶ್ರೀ ದುರ್ಗಾ ಪರಮೇಶ್ವರಿ ಕಿತ್ತೂರಮ್ಮನ ಜಾತ್ರಾ ಮಹೋತ್ಸವ

12:28 PM Mar 05, 2017 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿತ್ತೂರು ಗ್ರಾಮದ ಹಾಗೂ ಸುತ್ತಮುತ್ತಲ 18 ಗ್ರಾಮಗಳ ಗ್ರಾಮ ದೇವತೆ ಶ್ರೀ ದುರ್ಗಾ ಪರಮೇಶ್ವರಿ ಕಿತ್ತೂರಮ್ಮನವರ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಮಂಗಳವಾರ (ಮಾ.7)ದಂದು ಬೆಳಗ್ಗೆ 11 ಗಂಟೆಗೆ ದಶಮಿ ಲಗ್ನದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.

Advertisement

ಸೋಮವಾರ ಕಿತ್ತೂರಮ್ಮನ ದೇವರನ್ನು ದೇವಸ್ಥಾನದಿಂದ ಚುಂಚನಕಟ್ಟೆ ಹೊಳೆಗೆ ಭಕ್ತಾದಿಗಳು ತೆಗೆದುಕೊಂಡು ಹೋಗಿ ದೇವರನ್ನು ಮಡಿ ಮಾಡಿಕೊಂಡು ನಂತರ ದಾರಿಯುದ್ದಕ್ಕೂ ಕಿತ್ತೂರಮ್ಮ ದೇವರನ್ನು ಪೂಜಿಸಿಕೊಂಡು ದೇವಸ್ಥಾನಕ್ಕೆ ತರುತ್ತಾರೆ.

ಮಂಗಳವಾರ ಕಿತ್ತೂರು ಹಾಗೂ ಸುತ್ತಮುತ್ತಲ 18 ಕೊಪ್ಪಲುಗಳ ವಿವಿಧ ಕೋಮುಗಳ ಮುಖಂಡರ ಮುಂದಾಳತ್ವದಲ್ಲಿ ದೇವರನ್ನು ದೇವಸ್ಥಾನ ದಿಂದ ಮೆರವಣಿಗೆಯಲ್ಲಿ ಹೊತ್ತು ತಂದು ಅಲಂಕರಿಸಿದ ರಥದಲ್ಲಿ ಕುಳ್ಳರಿಸಿದ ನಂತರ ರಥೋತ್ಸವ ನಡೆಯಲಿದೆ.

1928ರಲ್ಲಿ ಮೈಸೂರಿನ ಮಹಾರಾಜ ರಾದ ಕೃಷ್ಣರಾಜೇಂದ್ರ ಒಡೆಯರ್‌ ಅವರಿಂದ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಕಿತ್ತೂರಮ್ಮ ದೇವತೆಯ ರಥೋತ್ಸವವನ್ನು ಅಂದಿನಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಜಾತ್ರಾ ಮಹೋತ್ಸವಕ್ಕೆ ಬರುವ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ, ಪಾನಕ, ಮಜ್ಜಿಗೆ ಮತ್ತಿತರ ವಿತರಣೆಯನ್ನು ಏರ್ಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next