Advertisement

ಸಾಂಸ್ಕೃತಿಕ ನಗರಿ ಮೈಸೂರು ಹೆಲ್ತ್‌ ಹಬ್‌ ಆಗಲಿದೆ

02:25 PM Jan 24, 2020 | Suhan S |

ಮೈಸೂರು: ಪಾರಂಪರಿಕ ನಗರಿ ಹಾಗೂ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಮೈಸೂರು ಮುಂದಿನ ದಿನಗಳಲ್ಲಿ ಹೆಲ್ತ್‌ ಹಬ್‌ ಆಗಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದ ಕೆಆರ್‌ಎಸ್‌ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣದೊಳಗೆ 75 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕೆ ಆದ್ಯತೆ ಕೊಡಬೇಕು. ಆರೋಗ್ಯವಿಲ್ಲದೆ ಏನೇ ಸಾಧಿಸಿದರೂ ಅದು ವ್ಯರ್ಥ. ಇಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬರಾದರೂ ಕಾಯಿಲೆಗೆ ಬಿದ್ದವರು ಇರುತ್ತಾರೆ. ನಾನು ಎಂಬಿಬಿಎಸ್‌ ಓದಿರುವ ವೈದ್ಯನಲ್ಲ. ಆರೋಗ್ಯ ಕ್ಷೇತ್ರದಲ್ಲಿ ಪರಿಣಿತಿಯನ್ನೂ ಸಾಧಿಸಿಲ್ಲ. ಆದರೂ ನಾನು 2009ರಲ್ಲಿ ಆರೋಗ್ಯ ಸಚಿವನಾದೆ. 108 ಆ್ಯಂಬುಲೆನ್ಸ್‌ ಶುರು ಮಾಡಿದೆ. ಇದೀಗ ಮತ್ತೆ ಅದೇ ಖಾತೆ ಒಲಿದು ಬಂದಿದ್ದು, ನನ್ನ ಅದೃಷ್ಟವೇ ಸರಿ. ಹಾಗಾಗಿ ಬಡವರ ಆರೋಗ್ಯಕ್ಕೆ ನನ್ನ ಮೊದಲ ಆದ್ಯತೆ. ಚಿಕಿತ್ಸೆ ಕೇಳಿಕೊಂಡು ಬರುವ ರೋಗಿಗಳಿಮ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ ಎಂದು ತಿಳಿಸಿದರು.

ಸದ್ಯ ಬೀದರ್‌ನಿಂದ ಚಾಮರಾಜನಗರದವರೆಗೆ ಪ್ರವಾಸ ಕೈಗೊಂಡಿದ್ದೇನೆ. ಪ್ರತಿ ಆಸ್ಪತ್ರೆಗೂ ಭೇಟಿ ನೀಡುತ್ತಿದ್ದೇನೆ. ಈ ವೇಳೆ ಸರಕಾರಿ ಅತಿಥಿ ಗೃಹದಲ್ಲಿ ಉಳಿಯದೇ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡುತ್ತಿದ್ದೇನೆ. ನಾನೇ ನೇರವಾಗಿ ಆಸ್ಪತ್ರೆಗೆ ಹೋದರೆ ವೈದ್ಯರು ಬರುತ್ತಾರೆ. ಅತಿಥಿಗೃಹದಲ್ಲಿ ಕುಳಿತರೆ ರೋಗಿಗಳ ಸಮಸ್ಯೆ ಕೇಳಲು ಆಗುವುದಿಲ್ಲ. ಸರ್ಕಾರ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಸಚಿವ ಸ್ಥಾನ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಆದರೆ, ಜನರನ್ನು ಮೆಚ್ಚಿಸುವ ಕೆಲಸ ಮಾಡುವುದಕ್ಕಿಂತ ದೇವರನ್ನು ಮೆಚ್ಚುವ ಕೆಲಸ ಮಾಡಿ ಹೋಗುತ್ತೇನೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 3500 ವೈದ್ಯರ ಹುದ್ದೆ ಖಾಲಿ ಇದ್ದು, ಕೆಪಿಎಸ್‌ಸಿ ಮೂಲಕ ನೇಮಕ ಮಾಡಿದರೆ 6 ತಿಂಗಳಾದರೂ ಬೇಕು. ಹಾಗಾಗಿ ಸಿಎಂ ಅವರೊಂದಿಗೆ ಮಾತನಾಡಿ ನೇರ ನೇಮಕ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದೇನೆ. ಯಡಿಯೂರಪ್ಪ ಅವರು ಒಪ್ಪಿದ್ದಾರೆ. ಮೂರು ತಿಂಗಳು ಅವಕಾಶ ಕೊಡಿ. ಖಾಲಿ ಹುದ್ದೆ ಭರ್ತಿ ಮಾಡುತ್ತೇನೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್‌ಗಳನ್ನು ಕಾಯಂಗೊಳಿಸಲಾಗುವುದು. ಡಿ ಗ್ರೂಪ್‌ ನೌಕರರಿಗೆ ಕಾರ್ಪೊ ರೇಟರ್‌ ಸೆಕ್ಟರ್‌ ಅಡಿ ಉತ್ತಮ ವೇತನ ನೀಡಲಾಗು ವುದು. ನೇರವಾಗಿ ಅವರ ಖಾತೆಗೆ ಹಣ ಜಮೆ ಆಗುವಂತೆ ಮಾಡಲಾಗುವುದು ಎಂದರು.

ಜಿಲ್ಲಾಸ್ಪತ್ರೆಗೆ ಬೇಕಾದ ಬೆಡ್‌, ಸಲಕರಣೆ, ವೈದ್ಯರು, ನರ್ಸ್‌ಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಕ್ಯಾನ್ಸರ್‌ ತಪಾಸಣೆಗೆ ಉಪಕರಣಗಳು ಹಾಗೂ ರಕ್ತನಿಧಿ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ವೇತನ ಹೆಚ್ಚಿಸಲಾಗುವುದು. ಎಲ್ಲೆಡೆ ಜನೌಷಧ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿದರು. ಸಂಸದ ಪ್ರತಾಪಸಿಂಹ, ಶಾಸಕರಾದ ಎಲ್‌. ನಾಗೇಂದ್ರ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿ ರಾಮ್‌ ಜಿ. ಶಂಕರ್‌, ಪಾಲಿಕೆ ಆಯುಕ್ತ ಗುರು ದತ್ತಹೆಗ್ಡೆ, ಡಿಎಚ್‌ಒ ಡಾ.ವೆಂಕಟೇಶ್‌, ಜಿಲ್ಲಾ ಶಸ ಚಿಕಿತ್ಸಕ ಡಾ.ಲಕ್ಷ್ಮಣ್‌ ಸೇರಿದಂತೆ ಇತರರು ಹಾಜರಿದ್ದರು.

ಶವಾಗಾರ ಸ್ಥಳಾಂತರ: ಸದ್ಯ ಜಿಲ್ಲಾಸ್ಪತ್ರೆಗೆ ಸಮೀಪ ದಲ್ಲೇ ಶವಾಗಾರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಆಸ್ಪತ್ರೆ ಆಸುಪಾಸಿನ ಮನೆಗಳ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮಕ್ಕಳು, ವೃದ್ಧರು ಶವಾಗಾರ ನಿರ್ಮಾಣದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಶಾಸಕ ಎಲ್‌.ನಾಗೇಂದ್ರ ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆ ಬಳಿ ಶವಾಗಾರವನ್ನು ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next