Advertisement

ಮೋದಿ ಆಡಳಿತದಲ್ಲಿ ದೇಶ ಶ್ರೀಮಂತ

10:49 AM Mar 09, 2019 | |

ಶಿವಮೊಗ್ಗ: ಮೋದಿ ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ನಗರದ ರಾಯಲ್‌ ಆರಿಡ್‌ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಬುದ್ದರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಮೋದಿ ಜಗತ್ತಿನ ಪುಣ್ಯಾತ್ಮ. ಆತನ ದೇಶಭಕ್ತಿಗೆ ಎಲ್ಲರೂ ಬೆರಗಾಗಿದ್ದಾರೆ. ಭಾರತದ ಹೆಸರನ್ನು ವಿಶ್ವದಲ್ಲಿಯೇ ಪಸರಿಸಬೇಕು ಎಂಬ ಮಹತ್ವಾಕಾಂಕ್ಷಿ ಮೋದಿ ಅವರದು. ಅವರ 5 ವರ್ಷದ ಆಡಳಿತದಲ್ಲಿ ಭಾರತ ಶ್ರೀಮಂತ ರಾಷ್ಟ್ರವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಮೊದಲು ಭಾರತ ಭ್ರಷ್ಟಾಚಾರದಲ್ಲಿ 110ನೇ ಸ್ಥಾನದಲ್ಲಿತ್ತು. ಈಗ ಅದು 20ನೇ ಸ್ಥಾನಕ್ಕೆ ಬಂದಿದೆ ಎಂದರು.

ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವ ದೃಷ್ಟಿಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ನಾನು ಮತ್ತೆ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ನನ್ನನ್ನು ಆಯ್ಕೆ ಮಾಡುವ ಮೂಲಕ ಮೋದಿಯವರನ್ನು ಗೆಲ್ಲಿಸಬೇಕಾಗಿದೆ ಎಂದರು.
 
ನಾನು ಸಂಸದನಾದ ಮೇಲೆ ಕಡಿಮೆ ಅವಧಿಯಲ್ಲಿಯೇ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಈಗಾಗಲೇ ತುಮರಿ ಸೇತುವೆಗೆ ಟೆಂಡರ್‌ ಕರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಸಿಂಹಧಾಮ ಮೇಲ್ದರ್ಜೆಗೆ ಏರಿದೆ. ತುಮಕೂರಿನಿಂದ ಹೊನ್ನಾವರದವರೆಗೆ ಸುಮಾರು 4800 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಲಿದೆ ಎಂದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ರಾಜ್ಯದಲ್ಲೂ ವಿಸ್ತಾರಗೊಂಡಿವೆ. ಸುಮಾರು 8 ಕೋಟಿ ಕುಟುಂಬಗಳಿಗೆ ಉಜ್ವಲ್‌ ಯೋಜನೆ ಉಪಯೋಗವಾಗಿದೆ. ರಾಷ್ಟ್ರದಲ್ಲಿ ಸುಮಾರು 12 ಕೋಟಿ ಜನರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ಕೇಂದ್ರದ ಸಾಧನೆಗಳು ಸಾಕಷ್ಟು ಇವೆ. ಇವೆಲ್ಲವನ್ನು ಗಮನಿಸಿ ರಾಜ್ಯದಲ್ಲೂ ಕೂಡ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌ ಮಾತನಾಡಿ, ಭಾರತದ ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವಕ್ಕೆ ಒಂದುಅರ್ಥ ಕೊಟ್ಟವರು. ಭಾರತದ ಸೇನೆಯನ್ನು ಬಲಿಷ್ಟವಾಗಿ ಕಟ್ಟಿದವರು. ನೆರೆಯ ಪಾಕ್‌ಗೆ ತಕ್ಕ ಉತ್ತರ ಕೊಟ್ಟವರು. ಇವರ ಕಾಲದಲ್ಲಿ ಸೈನಿಕರಿಗೆ ಸಾಕಷ್ಟು ಒಳ್ಳೆಯದಾಗಿದೆ ಎಂದರು. 

Advertisement

ಕಳೆದ 5 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದಿದ್ದಿದ್ದಾರೆ. ಭಾರತದ ಕೀರ್ತಿ ಹಬ್ಬಿದೆ. ಭ್ರಷ್ಟಾಚಾರ ಮುಕ್ತ ಆಡಳಿತವಿದೆ. ಅವರ ಕೈ ಜೋಡಿಸಬೇಕಾಗಿದೆ. ಹಾಗಾಗಿಯೇ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರವೂ ಸೇರಿದಂತೆ ಇಡೀ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಡಿ.ಎಸ್‌. ಅರುಣ್‌, ಎಸ್‌.ಎನ್‌. ಚನ್ನಬಸಪ್ಪ, ಎನ್‌.ಜೆ. ಸುಭಾಶ್‌, ಜ್ಞಾನೇಶ್ವರ್‌, ಎನ್‌.ಜಿ. ನಾಗರಾಜ್‌, ಮೇಯರ್‌ ಲತಾ ಗಣೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next