Advertisement

ಕಂಟೇನರ್‌ ಲಾರಿ ಹಾಯ್ದು ನಾಲ್ವರು ಯುವಕರು ಸಾವು

06:29 AM May 20, 2019 | Team Udayavani |

ಹುಮನಾಬಾದ: ಸ್ನೇಹಿತನೊಬ್ಬನ ಜನ್ಮದಿನ ಆಚರಣೆಗೆ ಹೋದ ನಾಲ್ವರು ಯುವಕರು ಕಂಟೇನರ್‌ ಲಾರಿ ಹಾಯ್ದು ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಮಂಗಲಗಿ ಓವರ್‌ ಬ್ರಿಜ್‌ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.

Advertisement

ಸಚಿನ್‌ ಹನುಮಂತ ಸಿರಕಟನಳ್ಳಿ (19), ಗುರುನಾಥ ವಿಠ್ಠಲ್‌ ಮಾಡ್ಗುಳ್‌ (18), ಅರುಣಕುಮಾರ ಕಾಶೀನಾಥ (17), ರಘುವೀರ ಭಿಮಣ್ಣ ಕೌನಳ್ಳಿ (17) ಮೃತ ಯುವಕರು. ಇವರೊಂದಿಗಿದ್ದ ಯುವಕ ಅರುಣಕುಮಾರ ಪ್ರಭುಸಾಗರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಂತರ ಕಂಟೇನರ್‌ ಲಾರಿ ಚಾಲಕ 800 ಮೀಟರ್‌ ದೂರದವರೆಗೆ ವಾಹನ ಚಲಾಯಿಸಿಕೊಂಡು ಹೋಗಿದ್ದರಿಂದ ಬೈಕ್‌ ಮತ್ತು ಕಂಟೇನರ್‌ಗೂ ಬೆಂಕಿ ತಗುಲಿದೆ. ಕಂಟೇನರ್‌ ಲಾರಿ ಚಾಲಕನ ನಿಷ್ಕಾಳಜಿಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

“ಏಕೈಕ ಪುತ್ರನಾಗಿದ್ದ ಸಚಿನ್‌, ಐಟಿಐ ಪೂರೈಸಿ ಬೀದರ್‌ನಲ್ಲಿ ಡಿಪ್ಲೊಮಾ ಓದುತ್ತಿದ್ದ. ರಜೆ ಇರುವುದರಿಂದ ಕಳೆದ ವಾರದ ಹಿಂದಷ್ಟೇ ಸ್ವಗ್ರಾಮ ಸಿರಕನಳ್ಳಿಗೆ ಬಂದಿದ್ದ. ಚೆನ್ನಾಗಿ ಓದಿ, ಐದು ಹೆಣ್ಣು ಮಕ್ಕಳ ತಂದೆಯಾದ ನನಗೆ ಎಲ್ಲ ಸಮಸ್ಯೆಗೂ ಪರಿಹಾರ ಒದಗಿಸುವಂತಿದ್ದ.

ನಾವು ಆತನನ್ನೇ ನಂಬಿದ್ದೆವು. ಈಗ ಅವನೇ ನಮ್ಮಿಂದ ಅಗಲಿರುವಾಗ ಭವಿಷ್ಯದ ಕುಟುಂಬ ನಿರ್ವಹಣೆ ದೊಡ್ಡ ಚಿಂತೆಯಾಗಿ ಕಾಡುತ್ತಿದೆ’ ಎಂದು ಮೃತ ಸಚಿನ್‌ ತಂದೆ ಹನುಮಂತ ನೋವು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next