Advertisement

ಎನ್‌ಐಎ ನ್ಯಾಯಾಲಯಕ್ಕೆ ಹಾಜರಾದ ಪ್ರಜ್ಞಾ

12:39 AM Jun 08, 2019 | Team Udayavani |
ಮುಂಬೈ: ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಾಲೆಗಾಂವ್‌ ಸ್ಫೋಟ ಪ್ರಕರಣದ ವಿಚಾರಣೆಗೆ ಸತತ 2 ಬಾರಿ ಗೈರಾಗಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌, ಶುಕ್ರವಾರ ನಡೆದ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಸಹ ಆರೋಪಿ ಸುಧಾಕರ್‌ ದ್ವಿವೇದಿ ಕೂಡ ಇದ್ದರು.

ಗಾಲಿ ಕುರ್ಚಿಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ಪ್ರಜ್ಞಾ, ಇಬ್ಬರು ಸಹಾಯಕರೊಂದಿಗೆ ಕಲಾಪ ಕೊಠಡಿ ಪ್ರವೇಶಿಸಿದರು. ಸ್ಫೋಟ ಆರೋಪಕ್ಕೆ ಸಂಬಂಧಿಸಿ ನಿಮ್ಮ ಹೇಳಿಕೆಯೇನು ಎಂದು ಕೇಳಿದಾಗ, ಪ್ರಕರ ಣದ ಬಗ್ಗೆ ತಮಗೇನೂ ಮಾಹಿತಿಯಿಲ್ಲ ಎಂದಷ್ಟೇ ಪ್ರಜ್ಞಾ ಹೇಳಿದರು. ವಾರಕ್ಕೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದರು. ಹೊರಬಂದ ಬಳಿಕ ಪ್ರಜ್ಞಾ, ತಮಗೆ ಆಸೀನರಾಗಲು ನೀಡಿದ ಕುರ್ಚಿಯ ಬಗ್ಗೆ ಹಾಗೂ ಕೋರ್ಟ್‌ನ ಕೊಠಡಿಯಲ್ಲಿ ಶುಚಿತ್ವದ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next