Advertisement

ಚುನಾವಣ ಬಾಂಡ್‌ಗೆ ಆಯೋಗ ಆಕ್ಷೇಪ

01:05 AM Mar 28, 2019 | mahesh |

ಹೊಸದಿಲ್ಲಿ: ರಾಜಕೀಯ ಪಕ್ಷಗಳ ದೇಣಿಗೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಕಪ್ಪು ಹಣ ವಹಿವಾಟನ್ನು ತಡೆಯುವ ನಿಟ್ಟಿನಲ್ಲಿ ಹೊರಡಿಸಲಾದ ಚುನಾವಣ ಬಾಂಡ್‌ನ‌ಲ್ಲಿ ಗಂಭೀರ ಲೋಪಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣ ಆಯೋಗ ಹೇಳಿದೆ. ಚುನಾವಣ ಬಾಂಡ್‌ನ‌ ನೀತಿಯಲ್ಲಿ ಮಾಡಿದ ಬದಲಾವಣೆಗಳು ಪಾರದರ್ಶಕತೆಯ ಮೇಲೆ ಪರಿಣಾಮ ಬೀರಲಿವೆ ಎಂದು ಆಯೋಗ ವಾದಿಸಿದೆ.

Advertisement

ಎಫ್ಸಿಆರ್‌ಎ 2010ರಲ್ಲಿ ಮಾಡಿದ ಬದಲಾವಣೆಯಲ್ಲಿ, ಪರಿಶೀಲನೆಗೆ ಒಳಪಡದ ವಿದೇಶಿ ಸಂಸ್ಥೆ ಅಥವಾ ವ್ಯಕ್ತಿಯಿಂದ ರಾಜಕೀಯ ಪಕ್ಷಗಳು ದೇಣಿಗೆ ಪಡೆಯಲು ಅವಕಾಶವಿದ್ದು, ಇದರಿಂದಾಗಿ ವಿದೇಶಿ ಶಕ್ತಿಗಳು ಭಾರತದ ನೀತಿ ನಿರೂಪಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಎಂದು ಆಯೋಗ ವಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next