Advertisement

ಸಮ್ಮಿಶ್ರ ಸರ್ಕಾರ ಶೀಘ್ರ ಪತನ: ಶೋಭಾ ಕರಂದ್ಲಾಜೆ 

06:20 AM May 27, 2018 | |

ಶಿವಮೊಗ್ಗ: ಅನೈತಿಕವಾಗಿ ರಚನೆಗೊಂಡ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಭವಿಷ್ಯವಿಲ್ಲ,ಆಯುಷ್ಯವೂ ಇಲ್ಲ. ಮಂತ್ರಿಮಂಡಲ ರಚನೆಯ ಬಳಿಕ ಇದು ಕುಸಿದು ಬೀಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ
ಕರಂದ್ಲಾಜೆ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿ, ಇದು ಅಲ್ಪಾವಧಿ ಸರ್ಕಾರ. ಎರಡೂ ಪಕ್ಷಗಳೂ ಸಚಿವ
ಸ್ಥಾನಗಳ ಮೇಲೆ ಕಣ್ಣಿಟ್ಟಿವೆ. ಇವರ ನಡುವೆ ಹೊಂದಾಣಿಕೆ ಎಂಬುದು ಕನಸಿನ ಮಾತು.ದೀರ್ಘ‌ಕಾಲದ ಮೈತ್ರಿ ಇವರ ನಡುವೆ ಉಳಿಯುವುದಿಲ್ಲ. ಇದರಿಂದಾಗಿ ಈ ಹಂತದಲ್ಲಿಯೇ ಮೈತ್ರಿ ಯಲ್ಲಿನ ವೈಮನಸ್ಸು ಹೊರಬೀಳುವ ಎಲ್ಲಾ
ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ
ಮಾಡಲಿದೆ. ರಾಜ್ಯದಲ್ಲಿ ವಿಧಾನಪರಿಷತ್‌ನ ಎಂಟು ಕ್ಷೇತ್ರಗಳಲ್ಲಿ  ನಡೆಯುವ ಚುನಾವಣೆಯಲ್ಲಿ ಬಿಜೆಪಿ
ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next