Advertisement

Politics: ಬಿ.ಎಸ್‌.ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡ: ಬೈರತಿ ಸುರೇಶ್‌

08:08 AM Oct 21, 2024 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಪ್ರಕರಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿರುವ ಬೈರತಿ ಸುರೇಶ್‌, ಈ ಬಗ್ಗೆ ಕೂಲಂಕಷ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶೋಭಾ ಕರಂದ್ಲಾಜೆ ಅವರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಡಬೇಕು. ಹಾಗಾದರೆ, ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ಅಂತ ನಾನೂ ಕೇಳುತ್ತೇನೆ. ಆ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಅಂತ ನಾನೂ ಆರೋಪ ಮಾಡುತ್ತೇನೆ. ಅದನ್ನು ಅವರು ಒಪ್ಪಿಕೊಳ್ಳುತ್ತಾರಾ? ಅದರ ಬಗ್ಗೆ ಕೂಲಂಕಷ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿದ್ದಾರೆ. ಸುಮ್ಮನೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಬಾರದು. ಅವರು ಹೇಳಿದಂತೆ ಇ.ಡಿ.ಯವರು ಕೇಳುತ್ತಾರಾ? ಶೋಭಾ ಅವರಿಗಿಂತ ಇ.ಡಿ. ಮೇಲೆ ನಮಗೆ ವಿಶ್ವಾಸ ಇದೆ ಎಂದು ತೀಕ್ಷ್ಣವಾಗಿ ಹೇಳಿದರು.

ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿ: 
ಮೈಸೂರಿನ ಶಾಸಕರೊಬ್ಬರಿದ್ದಾರೆ. ಅವರು ಮಾತೆತ್ತಿದರೆ ಬರೀ ಸುಳ್ಳು. ಒಳಗಡೆ ಪೂಜೆ ಮಾಡಿ ಹಣೆಗೆ ನಾಮ ಇಟ್ಟುಕೊಂಡ ಮಾತ್ರಕ್ಕೆ ಒಳ್ಳೆಯವರಾಗುವುದಿಲ್ಲ. ಹೊರಗಡೆ ಸುಳ್ಳು ಹೇಳಿದರೆ, ದೇವರು ಮೆಚ್ಚುವುದಿಲ್ಲ. ನಾನು ಈಗಲೂ ಸವಾಲು ಹಾಕುತ್ತೇನೆ, ಒಂದೇ ಒಂದು ಫೈಲ್‌ ನಾಪತ್ತೆಯಾಗಿದ್ದರೆ, ನಾನು ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡುತ್ತೇನೆ. ಅವರೂ ಬೇಕಿದ್ದರೆ, ಚಾಮುಂಡೇಶ್ವರಿ ಅಥವಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬೈರತಿ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next