Advertisement

ಮೈತ್ರಿ ಸರ್ಕಾರಕ್ಕೆ ಪೂರ್ಣ ಆಯುಷ್ಯವಿಲ್ಲ

06:30 AM Jun 03, 2018 | |

ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಮಾಡಿದೆ. ಆದರೆ ಈ ಮೈತ್ರಿ ಸರ್ಕಾರಕ್ಕೆ
ಪೂರ್ಣ ಆಯುಷ್ಯವಿಲ್ಲ ಎಂದು ಶಾಸಕ ಬಿ. ಶ್ರೀರಾಮುಲು ಪುನರುಚ್ಚರಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ 1947ರಿಂದಲೂ ವಿವಿಧ ಅಂಗ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಆದರೆ ಅಂತಹ ಯಾವುದೇ ಸರ್ಕಾರಗಳು ಪೂರ್ಣಾವಧಿ ಆಡಳಿತ ನಡೆಸಿಲ್ಲ.

ರಾಜ್ಯದಲ್ಲಿ ತೃತೀಯ ರಂಗ ಪ್ರದರ್ಶನ ನಡೆಸಲಿ. ಮಿತ್ರ ಪಕ್ಷಗಳು ತಮ್ಮ ಮೈತ್ರಿ ತೋರಿಸಲಿ. ಆದರೆ ಅವುಗಳು
ಕೆಲ ದಿನಗಳು ಮಾತ್ರ ಒಟ್ಟಾಗಿ ಇರುತ್ತವೆ. ನಂತರ ಬಿಟ್ಟು ಹೋಗುತ್ತವೆ ಎಂದರು. ಮೈತ್ರಿ ಸರ್ಕಾರದಲ್ಲಿ ಸಚಿವ
ಸಂಪುಟ ರಚನೆಯ ಮೇಲೆ ನಾವೇನು ಕಣ್ಣಿಟ್ಟಿಲ್ಲ.

ಯಾವುದೇ ಕಾದು ನೋಡುವ ಕೆಲಸವನ್ನೂ ನಾವು ಮಾಡಿಲ್ಲ. ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ  ಸಾಲ ಮನ್ನಾ ಮಾಡುವುದಾಗಿ ತಮ್ಮ ಪಕ್ಷದ
ಪ್ರಣಾಳಿಕೆಯಲ್ಲಿಯೇ ಲಿಖೀತವಾಗಿ ಭರವಸೆ ನೀಡಿದ್ದರು. ಮೊದಲು ಅವರು ನುಡಿದಂತೆ ನಡೆದುಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next