Advertisement

ಕುತ್ತಿಗೆ ಹಿಡಿದು ದಬ್ಬಿದ್ರೂ ಸಿಎಂ ಹೊರ ಹೋಗಲ್ಲ

12:30 AM Jan 29, 2019 | Team Udayavani |

ಕೊಪ್ಪಳ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕರು ತಮಗೆ ತಿಳಿದಂತೆ ಮಾತನಾಡುತ್ತಿದ್ದಾರೆ ಎಂದೆಲ್ಲ ಹೇಳಿ ರಾಜೀನಾಮೆ ಕೊಡಲು ಸಿದ್ಧ ಎಂದು ಮುಖ್ಯಮಂತ್ರಿಗಳು ಬ್ಲ್ಯಾಕ್‌ವೆುೕಲ್‌ ಮಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್‌ ಕೂಡ ಬ್ಲ್ಯಾಕ್‌ವೆುೕಲ್‌ ಮಾಡುತ್ತಿದೆ. ಸಿಎಂ ಪದೇಪದೆ ರಾಜೀನಾಮೆ ಕೊಡ್ತೀನಿ.. ಕೊಡ್ತೀನಿ.. ಎಂದು ಹೇಳ್ಳೋದಲ್ಲ. ಅವರು ರಾಜೀನಾಮೆ ಕೊಡಲ್ಲ ಎನ್ನೋದು ನಮಗೆ ಗೊತ್ತು. ಕುತ್ತಿಗೆ ಹಿಡಿದು ಹೊರ ದಬ್ಬಿದ್ರೂ ಅವರು ಹೋಗದಂತ ವ್ಯಕ್ತಿ ಎಂದರು. ನಮ್ಮ ಅಕ್ಕ-ತಂಗಿಯರ ಮೇಲೆ ಅತ್ಯಾಚಾರ ನಡೆದರೆ ಸುಮ್ಮನಿರಲು ಸಾಧ್ಯವಿಲ್ಲ. ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ನೂರಕ್ಕೆ ನೂರರಷ್ಟು ಬೆಂಬಲಿಸುವೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next