Advertisement

ತಮ್ಮ ಪಕ್ಷದ ಎಂಎಲ್‌ಸಿ ವಿರುದ್ದ ಮುಗಿ ಬಿದ್ದ ಮುಖ್ಯಮಂತ್ರಿ

01:22 AM Apr 12, 2019 | Team Udayavani |

ಮಂಡ್ಯ: ಸಂದೇಶ್‌ ನಾಗರಾಜು ನಮ್ಮಿಂದಲೇ ರಾಜಕೀಯ ಜನ್ಮ ಪಡೆದು ಇಂದು ನಮ್ಮ ವಿರುದ್ಧವೇ ನಿಂತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಒಂದು ಚುನಾವಣೆಯಲ್ಲೂ ಗೆಲ್ಲದ ಅವರನ್ನು ಗೆಲ್ಲಿಸಿದ್ದು ನಾವು. ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದ ನಮ್ಮ ಬಗ್ಗೆ ಕೃತಜ್ಞತೆ ಇಲ್ಲದೆ ಬಿಜೆಪಿ ಸೇರಿ ವಿರೋಧಿ ಅಭ್ಯರ್ಥಿ ಜೊತೆ ಸೇರಿಕೊಂಡು ನಮ್ಮ ವಿರುದಟಛಿವೇ ತೊಡೆ ತಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು. ಐಟಿಯವರು ಜೆಡಿಎಸ್‌ನವರನ್ನು ಟಾರ್ಗೆಟ್‌ ಮಾಡಿಕೊಂಡು ದಾಳಿ ನಡೆಸುತ್ತಿದ್ದಾರೆ. ಅವರು ಇನ್ನು 15 ದಿನ ದಾಳಿ ಮಾಡುತ್ತಾರೆ.ಇಂದೂ ಐಟಿ ದಾಳಿಯಾಗಿದೆ. ನಿನ್ನೆಯೂ ಆಗಿತ್ತು. ಐಟಿ ಮುಖ್ಯಸ್ಥ ಬಾಲಕೃಷ್ಣನ್‌ ನಮ್ಮನ್ನು ಟಾರ್ಗೆಟ್‌ ಮಾಡಿಕೊಂಡಿರುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next