Advertisement

ಸೋಂಕಿತ ಶವಗಳ ಸಂಸ್ಕಾರವೇ ಸವಾಲು

01:49 PM Apr 30, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕು ಸೇರಿದಂತೆ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಅಂತೆಯೇ ಕೋವಿಡ್‌ನಿಂದಸಾವನ್ನಪ್ಪುವವರ ಪ್ರಮಾಣವೂ ಹೆಚ್ಚಿದೆ.

Advertisement

ಆದರೆ ಕೋವಿಡ್‌ನಿಯಮಾನುಸಾರ ಅಂತ್ಯಕ್ರಿಯೆ ಮಾಡಲು ತಾಲೂಕುಆಡಳಿತಕ್ಕೆ ಸವಾಲಾಗಿದೆ.ನಗರದ ಡಿ.ಕ್ರಾಸ್‌ ರಸ್ತೆಯ ನಾಗರಕೆರೆ ಅಂಚಿನಲ್ಲಿರುವಸ್ಮಶಾನದಲ್ಲಿ ಕಳೆದ ಬಾರಿಯಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಆರಂಭಿಸಲಾಗಿ, ಮೊದಲುಶವಗಳನ್ನು ಹೂಳಲಾಗುತ್ತಿತ್ತು. ಈಗ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಮೃತ ದೇಹಗಳನ್ನು ಸುಡಲಾಗುತ್ತಿದೆ. ಆದರೆ ದಿನೇ ದಿನೇ ಹೆಚ್ಚಾಗುತ್ತಿರುವ ಮೃತದೇಹಗಳಿಂದಾಗಿ, ಕೋವಿಡ್‌ ಮಾರ್ಗಸೂಚಿಗಳ ಸುರಕ್ಷತಾನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ದೂರು,ಅಂತ್ಯ ಸಂಸ್ಕಾರಕ್ಕಾಗಿ ಹೆಚ್ಚಿನ ಹಣ ವಸೂಲಿಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಸಭೆಯಲ್ಲಿ ನಗರದ ಹೊರವಲಯದಲ್ಲಿ ಚಿತಾಗಾರ ನಿರ್ಮಿಸುವ ಕುರಿತು ಚರ್ಚೆ ನಡೆದಿದ್ದಾದರೂ ಕ್ರಮ ಕೈಗೊಂಡಿಲ್ಲ.

ಅಕ್ರಮ ನಡೆದಿಲ್ಲ: ಹಣ ನೀಡಬೇಡಿ:: ತಹಶೀಲ್ದಾರ್‌ಡಿ.ಕ್ರಾಸ್‌ ರÓಯ  ನಾಗರಕೆರೆ ಅಂಚಿನಲ್ಲಿರುವ ಸ್ಮಶಾನದಲ್ಲಿ ತಾಲೂಕು ಆಡಳಿತ ನೇಮಿಸಿರುವ ತಂಡವೇ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದು,ಯಾವುದೇ ಅಕ್ರಮ ನಡೆದಿಲ್ಲ. ಕೊರೊನಾದಿಂದ ಸಾವಿನ ಪ್ರಮಾಣ ಹೆಚ್ಚಿದ್ದು, ಅಂತ್ಯಕ್ರಿಯೆಗೆ ತಾಲೂಕು ಆಡಳಿತವೇವೆಚ ಭ ‌ರಿಸುತ್ತಿದೆ.

ಹೊರಗಿನ ಯಾವುದೇ ಶವಗಳು ಇಲ್ಲಿಸುಟ್ಟಿರುವ ನಿದರ್ಶನಗಳಿಲ್ಲ. ಹಣ ವಸೂಲಿ ಆರೋಪಗಳುಕೇಳಿ ಬಂದಿದ್ದು, ತಂಡಕ್ಕೆ ಹಣ ಪಡೆಯದಂತೆ ಕಟ್ಟುನಿಟ್ಟಿನಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ :ನಗರದಹೊರವಲಯದ ಚಿಕ್ಕತುಮಕೂರು ಸಮೀಪವಿರುವದೇವಾಂಗ ಮಂಡಲಿ ನಿರ್ವಹಿಸುತ್ತಿರುವ ಮುಕ್ತಿಧಾಮದಲ್ಲಿಕೋವಿಡ್‌ನಿಂದ ಮೃತಪಟ್ಟವರನ್ನು ಸುಡಲು ವ್ಯವಸ್ಥೆಮಾಡಲಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ತಿಳಿಸಿದ್ದಾರೆ. ಮುಕ್ತಿಧಾಮದ ವ್ಯವಸ್ಥೆಗಳನ್ನು ಪರಿಶೀಲಿಸಿದಬಳಿಕ ಮಾತನಾಡಿ, ಮುಕ್ತಿಧಾಮದಲ್ಲಿ ಈಗಾಗಲೇ ಬುಧವಾರ ಸಂಜೆ 2 ಕೋವಿಡ್‌ ಮೃತದೇಹಗಳನ್ನುಸುಡಲಾಗಿದೆ. ಇಲ್ಲಿ ಕೋವಿಡ್‌ ಮೃತದೇಹ ಸುಡಲುದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್‌ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಇಲ್ಲಿರುವ 6ರ ಪೈಕಿ2 ಸಿಲಿಕಾನ್‌ ಕಂಟೈನರ್‌ಗಳನ್ನು ಕೋವಿಡ್‌ ಮೃತದೇಹವನ್ನುಸುಡಲು ದೇವಾಂಗ ಮಂಡಲಿ ಅನುಮತಿ ನೀಡಿದ್ದಾರೆ.

ಕೋವಿಡ್‌ ಹೊರತಾದ ಸ್ವಾಭಾವಿಕ ಸಾವುಗಳಿಂದಮೃತಪಟ್ಟಿರುವವರಿಗೆ ಉಳಿದ ಸಿಲಿಕಾನ್‌ ಕಂಟೈನರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಾಲೂಕು ಆಡಳಿತನೇಮಿಸಿರುವ ತಂಡವೇ ಮುಕ್ತಿಧಾಮದ ಆಡಳಿತದೊಂದಿಗೆಸಂಪರ್ಕದಲ್ಲಿದ್ದು, ನಿಯಮಾನುಸಾರ ಅಂತ್ಯಕ್ರಿಯೆನಡೆಸುತ್ತದೆ. ಆ್ಯಂಬುಲೆನ್ಸ್‌ಗಾಗಿ ಯಾರೂ ಹಣಕೊಡಬೇಕಿಲ್ಲ. ದೇವಾಂಗ ಮಂಡಲಿಯ ಮುಕ್ತಿಧಾಮದ ಅಂತ್ಯಕ್ರಿಯೆ ನಿಯಮದಂತೆ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದರು.ಪರಿಶೀಲನೆ ವೇಳೆ ನಗರಸಭೆ ಪೌರಾಯುಕ್ತ ರಮೇಶ್‌ಎಸ್‌.ಸುಣಗಾರ್‌, ದೇವಾಂಗ ಮಂಡಲಿ ಅಧ್ಯಕ್ಷಎಂ.ಜಿ.ಶ್ರೀನಿವಾಸ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next