Advertisement

ಕೆರೆಗಳ ಡಿನೋಟಿಫೈಗೆ ಕೇಂದ್ರ ಸರಕಾರ ವಿರೋಧ

06:00 AM Aug 11, 2017 | Team Udayavani |

ಹೊಸದಿಲ್ಲಿ: ದೇಶದ ಯಾವುದೇ ಕೆರೆಗಳ ಡಿನೋಟಿಫೈಗೆ ಒಪ್ಪಿಗೆ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇದು ಒಪ್ಪತಕ್ಕ ಕ್ರಮವೂ ಅಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.

Advertisement

ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕ 1,600 ಕೆರೆಗಳ ಡಿನೋಟಿಫೈ ಬಗ್ಗೆ ಚಿಂತನೆ ನಡೆಸಿದೆ ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ ಎಂದರು. 

ಕರ್ನಾಟಕ ಈ ಬಗ್ಗೆ ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ ಎಂದ ಅವರು, ಒಂದು ವೇಳೆ ಇಂಥ ಪ್ರಸ್ತಾವನೆ ಬಂದರೆ ರಾಜ್ಯ ಸರಕಾರದಿಂದ ವರದಿ ಕೇಳುವುದಾಗಿ ಹೇಳಿದರು. ಅಲ್ಲದೆ ಕೆರೆಗಳ ಡಿನೋಟಿಫೈಗೆ ಕೇಂದ್ರ ಸರಕಾರದ ವಿರೋಧವಿದೆ. ಇದು ಉತ್ತಮ ಕೆಲಸವಲ್ಲ ಎಂದು ಅವರು ತಿಳಿಸಿದರು.

ಈ ಮಧ್ಯೆ, ದೇಶದಲ್ಲಿ ಮಳೆ ಪರಿಸ್ಥಿತಿ ಅತಂತ್ರವಾ ಗಿದ್ದು, ಕೆಲವು ಕಡೆಗಳಲ್ಲಿ ಬಂದರೆ, ಇನ್ನು ಕೆಲವು ಕಡೆ ಗಳಲ್ಲಿ ಬರುವುದೇ ಇಲ್ಲ. ಹೀಗಾಗಿ ನೀರಿನ ಸಂಗ್ರಹಕ್ಕೆ ಹೆಚ್ಚೆಚ್ಚು ಯೋಜನೆಗಳನ್ನು ಕೈಗೊಳ್ಳಲು ಚಿಂತನೆ ನಡೆಸಿರುವುದಾಗಿ ಅವರು ಲೋಕಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next