Advertisement

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

12:08 AM Dec 10, 2023 | Team Udayavani |

ಮಂಗಳೂರು: ಭಾರತದ ಸಂವಿಧಾನದಲ್ಲಿ ಶ್ರಿ ಕೇಶವಾನಂದ ಭಾರತಿ ಪ್ರಕರಣ ಮಹತ್ವ ಪೂರ್ಣವಾ ಗಿದ್ದು, ಪ್ರಜಾಪ್ರಭುತ್ವದ ಐತಿಹಾಸಿಕ ಮೌಲ್ಯವನ್ನು ಉಳಿಸಲು ವೇದಿಕೆ ಕಲ್ಪಿಸಿದೆ. ಈ ತೀರ್ಪು ಸಂವಿಧಾನದ ಆಶಯ ಗಳ ಮೇಲೆ ಅಧ್ಯಯನ ನಡೆಸಲು ಮಹತ್ವ ಪೂರ್ಣವಾಗಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಹೇಳಿದ್ದಾರೆ.

Advertisement

ಮಂಗಳೂರು ವಕೀಲರ ಸಂಘ, ಕೇಶವಾನಂದ ಭಾರತಿ ತೀರ್ಪಿನ ಸುವರ್ಣ ಮಹೋತ್ಸವ ಆಚರಣೆ ಸಮಿತಿ
ಎಡನೀರು ಮಠ ಹಾಗೂ ಮಂಗ ಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಆಶ್ರಯದಲ್ಲಿ ಶನಿವಾರ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ನಡೆದ”ಕೇಶವಾನಂದ ಭಾರತಿ ತೀರ್ಪು- ಭಾರತೀಯ ಸಂವಿಧಾನದ ನ್ಯಾಯತತ್ವದ ಹಿರಿಮೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾಡಿದರು.

ಮೂಲ ತಣ್ತೀ ಬದಲು ಅಸಾಧ್ಯ
ನಿಟ್ಟೆ ಸ್ವಾಯತ್ತ ವಿ.ವಿ. ಕುಲಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ಸಂವಿಧಾನದ ಮೂಲ ಸಿದ್ಧಾಂತ ಎಲ್ಲಿಯೂ ಬದಲಾ ವಣೆ ಆಗಿಲ್ಲ, ಆಗುವುದೂಇಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿ ಗಳಾದರೂ ಮೂಲಭೂತ ಹಕ್ಕುಗಳು ಎಂದಿಗೂ ಸುರಕ್ಷಿತವಾಗಿರು ತ್ತದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ ಎಂದರು.

ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ. ನಾರಾಯಣ ಭಟ್‌ ಕಾಸರಗೋಡು ಪ್ರಸ್ತಾವನೆಗೈದರು. ಮಂಗಳೂರು ವಕೀಲ ರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್‌ ರೈ, ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಎಣ್ಮಕಜೆ, ಕಾಲೇಜು ಪ್ರಾಂಶುಪಾಲ ಡಾ| ತಾರಾನಾಥ್‌ ಉಪಸ್ಥಿತರಿದ್ದರು.

ಸಂವಿಧಾನ, ನ್ಯಾಯಾಂಗಕ್ಕೆ ಗೌರವ:
ಎಡನೀರು ಮಠಾ ಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, 1970ರಲ್ಲಿ ಕೇರಳ ಸರಕಾರ ಭೂಸುಧಾರಣೆ ಕಾಯ್ದೆ ಜಾರಿಗೆ ತಂದಾಗ ಎಡನೀರು ಮಠದ 400 ಎಕರೆ ಭೂಮಿ ಒಕ್ಕಲು ಹೊಂದಿದವರ ಪಾಲಾಯಿತು. ಇದರಿಂದ ಮಠದ ಆದಾಯ ಕುಂಠಿತಗೊಂಡಿತು. ಇದಕ್ಕಾಗಿ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಕಾಯ್ದೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಅದರಲ್ಲಿ ಕೇಸು ಗೆಲ್ಲಲು ವಿಫಲವಾದರೂ ತೀರ್ಪು ಮಾತ್ರ ಐತಿಹಾಸಿಕ ಎಂದೆನಿಸಿತು. ಸಂವಿಧಾನದಲ್ಲಿ ಅನಗತ್ಯ ಬದಲಾವಣೆ ಅಸಾಧ್ಯ ಎಂಬುದನ್ನು ತೀರ್ಪು ತೋರಿಸಿದ್ದು ಅದಕ್ಕಾಗಿ ಕೇಸಿನ 50ನೇ ವರ್ಷಾಚರಣೆಯನ್ನು ಸಂಭ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next