Advertisement

Ullal ಬಸ್‌ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

12:37 AM Dec 20, 2023 | Team Udayavani |

ಉಳ್ಳಾಲ: ಖಾಸಗಿ ಬಸ್‌ನ ಚಾಲಕ ಕೊಂಡಾಣ ಬೆಳರಿಂಗೆ ನಿವಾಸಿ ಜಗದೀಶ್‌ (39) ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮೇಶ್ವರದಲ್ಲಿ ಮೃತದೇಹ ಪತ್ತೆಯಾಗಿದೆ.

Advertisement

ಅವಿವಾಹಿತರಾಗಿದ್ದ ಅವರು ಮಂಗಳವಾರ ಬೈಕ್‌ನಲ್ಲಿ ಸೋಮೇಶ್ವರ ಸಮುದ್ರ ತೀರಕ್ಕೆ ತೆರಳಿದ್ದರು. ಅಲ್ಲಿ ಬೈಕ್‌ ಇಟ್ಟು ಅಲ್ಲೇ ಟವಲೊಂದರಲ್ಲಿ ಬೈಕ್‌ ಕೀ, ಪರ್ಸ್‌, ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಪರ್ಸ್‌ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ.

ಜಗದೀಶ್‌ ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next