Advertisement

ಮಧ್ಯಂತರ ಚುನಾವಣೆ ನಡೆದ್ರೆ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ

11:43 PM Jun 21, 2019 | Lakshmi GovindaRaj |

ಶಿವಮೊಗ್ಗ: “ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಸಾಧ್ಯತೆ ಇದ್ದು ಬಿಜೆಪಿ ಸಿದ್ಧವಾಗಿದೆ. ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದಲ್ಲಿರುವುದು ಮೈತ್ರಿ ಸರ್ಕಾರವಲ್ಲ. ದ್ರೋಹಿಗಳ ಸರ್ಕಾರ. ಯಾವುದೇ ಕಾರಣಕ್ಕೂ ಇದು ಮುಂದುವರಿಯುವುದಿಲ್ಲ’ ಎಂದರು. ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡರಿಗೆ ಮಾತ್ರ ಅಸಮಾಧಾನವಿಲ್ಲ.

ಇಡೀ ರಾಜ್ಯದ ಜನ ಅಸಮಾಧಾನ ಹೊಂದಿದ್ದಾರೆ. ದೇವೇಗೌಡರಿಗೆ ಈಗ ಜ್ಞಾನೋದಯವಾಗಿದೆ. ಗೌಡರ ಸೋಲಿಗೆ ಕಾಂಗ್ರೆಸ್‌ ಕಾರಣ ಎಂದು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next