Advertisement

ಅಧ್ಯಾತ್ಮದಿಂದ ಮಾನವ ಜನ್ಮ ಸಾರ್ಥಕ

06:21 PM Mar 19, 2022 | Team Udayavani |

ಮಹಾಲಿಂಗಪುರ: ದಾನ, ಧರ್ಮ ಮತ್ತು ಅಧ್ಯಾತ್ಮ ಸಂಸ್ಕಾರದ ಬಲದಿಂದ ಮಾನವ ಜನ್ಮದ ಸಾರ್ಥಕತೆ ಪಡೆಯಲು ಸಾಧ್ಯವಿದೆ ಎಂದು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಢಪಳಾಪೂರ ಸಹೋದರರ ತೋಟದಲ್ಲಿ ಹೋಳಿ ಹಬ್ಬದ ವಿಶೇಷ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ಗುರು-ಹಿರಿಯರ ಮೇಲೆ ಗೌರವ, ಅಭಿಮಾನ ಕಡಿಮೆಯಾಗುತ್ತಿರುವುದು ವಿಷಾದನೀಯ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಸತ್ಸಂಗದಲ್ಲಿ ಭಾಗವಹಿಸಿ ಉತ್ತಮ ಸಂಸ್ಕಾರ-ಸಂಸ್ಕೃತಿ ಬೆಳೆಸಿಕೊಂಡು ಮಾನವಿಯ ಮೌಲ್ಯ ಕಾಪಾಡುವ ಜತೆಗೆ ಗುರು-ಹಿರಿಯರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದರು.

ಮನುಷ್ಯ ನಾಮಸ್ಮರಣೆ, ಜಪ, ತಪ, ಸಂಸ್ಕೃತಿ, ಸಂಸ್ಕಾರವಿಲ್ಲದೇ ವ್ಯರ್ಥವಾಗಿ ಆಯುಷ್ಯ ಕಳೆಯುತ್ತಿದ್ದಾನೆ. ಯಾವುದೇ ಸ್ವಾರ್ಥವಿಲ್ಲದೇ ಪರರ ಹಿತಕ್ಕಾಗಿ ಶ್ರಮಿಸುವವರು ಮಾತ್ರ ಸಮಾಜದಲ್ಲಿ ಮಹಾತ್ಮರಾಗಲು ಸಾಧ್ಯ. ಮನುಷ್ಯನು ಬದುಕು ಆರೋಗ್ಯಕರ, ಸದಾಚಾರ, ನಿ ರ್ದಿಷ್ಟ ಗುರಿ ಹೊಂದಿದಾಗ ಮಾತ್ರ ಮಾನವ ಜನ್ಮದ ಸಾರ್ಥಕತೆ ಸಾಧ್ಯ ಎಂದರು.

ಮಲ್ಲೇಶಪ್ಪ ಕಟಗಿ ಶರಣರು ಮಾತನಾಡಿ, ಮನುಷ್ಯ ಗಳಿಸುವ ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತಿಗೆ ಹೆಚ್ಚಿನ ಮಹತ್ವವಿದ್ದು, ಇಂದು  ಸಿರಿವಂತರಾಗುವುದಕ್ಕಿಂತ ಸಂಸ್ಕಾರಯುತ ಮನುಷ್ಯರಾಗಿ ಬಾಳುವುದು ಅವಶ್ಯವಾಗಿದೆ. ನಮ್ಮ ನಡೆ-ನುಡಿ, ಆಚಾರ-ವಿಚಾರ, ಪದ್ಧತಿಗಳು ಇತರರಿಗೆ ಮಾದರಿಯಾಗಿರಬೇಕು. ಇಂದು ಅಧ್ಯಾತ್ಮ ಅತ್ಯವಶ್ಯಕವಾಗಿದೆ. ನೀತಿ ಇಲ್ಲದ ಶಿಕ್ಷಣ, ಬೀತಿ ಇಲ್ಲದ ಶಾಸನ, ಮೀತಿ ಇಲ್ಲದ ಜೀವನ, ಸೀಮಾತೀತ ಸ್ವಾತಂತ್ರ್ಯದಿಂದ ಮನುಷ್ಯನ ಜೀವನಕ್ರಮವು ವಿನಾಶದತ್ತ ಸಾಗಿದೆ. ಪ್ರತಿಯೊಬ್ಬರು ಅಧ್ಯಾತ್ಮದತ್ತ ಒಲವು ತೋರಿಸಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಯೋಗಿರಾಜ ಸದಾಶಿವ ಗುರೂಜಿ ಮಾತನಾಡಿ, ಮನುಷ್ಯನ ಜೀವನದ ಅಭಿವೃದ್ಧಿಯಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿ ಪ್ರತಿಯೊಬ್ಬರು ಯೋಗಮಾಡಿ, ಹಿತಮಿತ ಆಹಾರ ಪದ್ದತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಜರುಗಿದ ಭಜನಾ ಕಾರ್ಯಕ್ರಮಗಳು ಗಮನ ಸೆಳೆದವು. ಮಹಾಲಿಂಗಪುರ, ಹುಲಗಬಾಳಿ, ಹಳ್ಳೂರ, ಸತ್ತಿ, ನಾವಲಗಿ, ತೇರದಾಳ, ಅಕ್ಕಿಮರಡಿ ಸೇರಿದಂತೆ ವಿವಿಧ ಊರುಗಳು 12 ಕಲಾ ತಂಡಗಳ ಭಜನಾ ಕಾರ್ಯಕ್ರಮ ಗಮನ ಸೆಳೆದವು. ಪತ್ರಕರ್ತ ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ-ವಂದಿಸಿದರು.

Advertisement

ಬಸವರಾಜ ಢಪಳಾಪೂರ, ವಿವೇಕ ರವಿ ಢಪಳಾಪೂರ, ನವೀನ ಬ. ಢಪಳಾಪೂರ, ಭರತ ಬ. ಢಪಳಾಪೂರ, ಈಶ್ವರಪ್ಪ ಮುಂಡಗನೂರ, ಮಹಿಬೂಬ ಸನದಿ, ಮಹಾದೇವ ಕೌಜಲಗಿ, ಕಲ್ಲಪ್ಪ ಚಿಂಚಲಿ, ಎ.ಟಿ. ಪಾಟೀಲ, ವಿಜಯಕುಮಾರ ಸಬಕಾಳೆ, ಶಿವಾನಂದ ಹುಣಶ್ಯಾಳ, ಹನಮಂತ ಮೀರಾಪಟ್ಟಿ, ಜಯವಂತ ಬಿಳ್ಳೂರ, ಶಿವಾನಂದ ಪಟ್ಟೇದ, ಬಸವರಾಜ ನುಚ್ಚಿ, ಪ್ರಕಾಶ ಮಾಳಗಿ, ಈಶ್ವರ ಹಳ್ಳಿ, ಚಂದ್ರಪ್ಪ ಡೋಣಿ, ಉದ್ದಪ್ಪ ನಿಲಾರಿ, ಮಹಾಲಿಂಗ ಕರೆಹೊನ್ನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next