Advertisement

ಸಣ್ಣಪ್ಪನ ದೊಡ್ಡ ಆದಾಯ

11:42 AM Jan 29, 2018 | |

ಓದಿದ್ದು ಬಿ.ಎ.ಬಿ.ಇಡಿ.  ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಸೇರಿ ಸತತ 5 ವರ್ಷ ಕೆಲಸ ಮಾಡಿದರು.  ಆ ನಂತರ ಕೃಷಿಗೆ ಇಳಿದು ಈಗ ಕೈತುಂಬ ಲಾಭ ಮಾಡುತ್ತಿದ್ದಾರೆ. 

Advertisement

ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಪ್ರಗತಿಪರ ರೈತ ಮಲ್ಲಪ್ಪ ರಾಮಪ್ಪ ಸಣ್ಣಪ್ಪನ್ನವರ, ಈ ದೇವರ ಕೆಲಸವನ್ನೇ ಬಿಟ್ಟು ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. 

ಶಿವಯೋಗಮಂದಿರದ ಹತ್ತಿರ ಮಲಪ್ರಭಾ ನದಿಯ ದಂಡೆಯ ಮೇಲೆ ಇವರದು 8 ಎಕರೆ ಜಮೀನಿದೆ. ಇದರಲ್ಲಿ  ಸಾವಯವ ಪದ್ಧತಿ ಮೂಲಕ ಗೋವಿನ ಜೋಳ, ಈರುಳ್ಳಿ, ಸಜ್ಜೆ, ಕಡಲೆ, ಶೇಂಗಾ, ತೊಗರಿ, ಮೆಣಸಿನಕಾಯಿ, ಕಬ್ಬು, ಗೋದಿ, ಅಲಸಂದಿ ಬೆಳೆಯುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.  

 ಇವರ ಮೂಲ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮ.  ಓದಿದ್ದು ಬಿ.ಎ.ಬಿ.ಇಡಿ.  1988 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ವಿಷಯ ಬೋಧಿಸಲು ಸಹಶಿಕ್ಷಕರಾಗಿ ಸೇರಿ ಸತತ 5 ವರ್ಷ ಕೆಲಸ ಮಾಡಿದರು. ನಂತರ ತಂದೆ ಮತ್ತು ತಾಯಿ ನಿಧನದ ನಂತರ ತಮಗೆ ಇದ್ದ 8 ಎಕರೆ ನೀರಾವರಿ ಭೂಮಿಯ ಕೃಷಿ ಮಾಡಲು ಬಂದರು.   ಇದು ತಂದೆಯ ಆಸೆಯೂ ಆಗಿತ್ತು. 

   ಎಲ್ಲ ರೀತಿಯ ಬೆಳೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುತ್ತದೆ. ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆಯಲ್ಲಿ ಲಾಭವಾಗುತ್ತದೆ. ವಿಷಮುಕ್ತ ಆಹಾರ ಬೆಳೆದಂತಾಗುತ್ತದೆ. ಉತ್ಪಾದನೆ ಹೆಚ್ಚಾಗುತ್ತದೆ. ರೋಗಗಳು ಬರುವುದಿಲ್ಲ. ಮಳೆ ಕಡಿಮೆಯಾದರೂ ಬೆಳೆ ಬರುತ್ತದೆ. ಬೆಲೆ ಹೆಚ್ಚು ಬರುತ್ತದೆ, ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ, ಲಾಭ ಹೆಚ್ಚು ಬರುತ್ತದೆ.  ಹೀಗೆ ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಎಂದೆಲ್ಲ ಕಳೆದು, ಲಾಭ ನಷ್ಟಗಳನ್ನು   ಲೆಕ್ಕ ಹಾಕಿಯೇ ಕೃಷಿಯನ್ನು  ಶುರುಮಾಡಿದ್ದು ಅಂತಾರೆ ರಾಮಪ್ಪ. 

Advertisement

     ಎರೆಹುಳು ಗೊಬ್ಬರ, ತಿಪ್ಪೆ ಗೊಬ್ಬರ, ಕಾಂಪೋಸ್ಟ್‌ ಗೊಬ್ಬರ, ಹಸಿರು ಎಲೆ ಗೊಬ್ಬರ, ಬಯೋ ಡೈಜಿಸ್ಟ್‌, ಕುರಿ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡುವುದರಿಂದ ಉತ್ತಮ ಇಳುವರಿ ಬಂದಿದೆ.  ಗೊಬ್ಬರ ಕಡಿಮೆ ಬಿದ್ದಾಗ ಕೃಷಿ ಇಲಾಖೆಯಿಂದ ಕಾಂಪೋಸ್ಟ್‌, ಜಿಪ್ಸಂ, ಜಿಂಕ್‌,ಬೋರಾನ್‌ ತಂದು ಹಾಕುತ್ತೇನೆ. ಜಿಂಕ್‌ ಬೋರಾನ್‌ ಹಾಕುವುದರಿಂದ ಭೂಮಿ ಅರಳಿ ಫ‌ಲವತ್ತತೆ ಆಗುತ್ತದೆ ಎಂಬುದು ಅವರ ಅನುಭವದ ಮಾತು. 

     ಕಳೆದ 10 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಬೇಸಾಯದಲ್ಲಿ ತೊಡಗಿರುವ ಇವರು ಹೀಗೆ ಪ್ರಾರಂಭದಲ್ಲಿ ಕೇವಲ 8 ಎಕರೆ ಜಮೀನು ಇತ್ತು. ಈಗ 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಸುಮಾರು 8 ವರೆ ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಉಳಿದಂತೆ ಕಡಲೆ, ಗೋದಿ, ಜೋಳ, ತೊಗರಿ, ಅಲಸಂದಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಪ್ರತಿ ವರ್ಷ ಸರಾಸರಿ 350 ರಿಂದ 400 ಕ್ವಿಂಟಾಲ್‌ ಗೋವಿನಜೋಳ ಇಳುವರಿ ದೊರೆಯುತ್ತಿದೆ. ಇದರಿಂದ ಪ್ರತಿ ವರ್ಷ ಸರಾಸರಿ 8 ರಿಂದ 10 ಲಕ್ಷ ಆದಾಯ ಬರುತ್ತದೆ. 1 ಎಕರೆ ಭೂಮಿಯಲ್ಲಿ 65 ಟನ್‌ ಕಬ್ಬು ಬೆಳೆ ಬೆಳೆಯುತ್ತಾರೆ. ಇವರ ತೋಟದಲ್ಲಿ 180 ಕ್ಕೂ ಹೆಚ್ಚು ಅರಸೀಕೆರೆ ಜವಾರಿ ತೆಂಗಿನ ಗಿಡಗಳಿವೆ. ವರ್ಷವಿಡಿ  ಇವರ ತೋಟದಲ್ಲಿ 10 ಜನ ಕೂಲಿಕಾರ್ಮಿಕರು ಕೆಲಸ ಮಾಡುತ್ತಾರೆ. ಒಂದು ವರ್ಷದಲ್ಲಿ ಕನಿಷ್ಠ 35 ರಿಂದ 40 ಟ್ರ್ಯಾಕ್ಟರ್‌ ಗೊಬ್ಬರ ಉತ್ಪಾದನೆಯಾಗುತ್ತಿರುವುದರಿಂದ, ಗೊಬ್ಬರದ ಖರ್ಚು ಉಳಿತಾಯವಾಗುತ್ತಿದೆ. ವೈಜಾnನಿಕ ರೀತಿಯಲ್ಲಿ ಸತತ ಪರಿಶ್ರಮದಿಂದ ಕೃಷಿ ಮಾಡುವುದರಿಂದ ನಷ್ಟ ಆಗುವುದಿಲ್ಲ ಎನ್ನುತ್ತಾರೆ ರಾಮಪ್ಪ ಸಣ್ಣಪ್ಪ. 

ಎಚ್‌.ಆರ್‌.ಕಡಿವಾಲ, ಬಾದಾಮಿ

Advertisement

Udayavani is now on Telegram. Click here to join our channel and stay updated with the latest news.

Next