Advertisement

ಚೇತರಿಕೆ ಪ್ರಮಾಣವೇ ಉತ್ತಮ

01:16 AM Apr 24, 2020 | Sriram |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ವೈರಸ್‌ ಏರಿಕೆಯ ಪ್ರಮಾಣ ಸಣ್ಣದಾಗಿದ್ದು, ಚೇತರಿಕೆಯ ಪ್ರಮಾಣ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ದೇಶಾದ್ಯಂತ ಸೋಂಕಿತರ ಪ್ರಮಾಣ 23 ಸಾವಿರ ದಾಟಿದ್ದರೂ ಚೇತರಿಕೆಯ ಪ್ರಮಾಣ ಶೇ.19ರಷ್ಟಿದೆ ಎಂದೂ ಕೇಂದ್ರ ಸರಕಾರ ಹೇಳಿದೆ.

Advertisement

ಅಂದರೆ, ಗುರುವಾರ ರಾತ್ರಿ ವೇಳೆಗೆ ಒಟ್ಟಾರೆ ಚೇತರಿಕೆಯಾದವರ‌ ಸಂಖ್ಯೆ 5,000ಕ್ಕೆ ತಲುಪಿದೆ. ಜತೆಗೆ 225ಕ್ಕೂ ಹೆಚ್ಚು ಮಂದಿ ಗುರುವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 14 ದಿನಗಳಿಂದ 78 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ 12 ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಒಂದೂ ಪ್ರಕರಣ ದೃಢಪಟ್ಟಿಲ್ಲ ಎಂದೂ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ.

ಮೇ ತಿಂಗಳ ಮಧ್ಯ ಭಾಗದ ವೇಳೆಗೆ ದೇಶದಲ್ಲಿ 5.35 ಲಕ್ಷ ಸೋಂಕಿತರು ಮತ್ತು 38,220 ಸಾವು ಸಂಭವಿಸಬಹುದು ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಕೇಂದ್ರ ಸರಕಾರ ಈ ರೀತಿಯ ಅಭಯ ನೀಡಿದೆ. ದೇಶದಲ್ಲಿ ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಅಂದರೆ ಭಾರೀ ಚಿಕ್ಕದಾಗಿದೆ. ಸಾವಿನ ಸಂಖ್ಯೆಯೂ ಕಡಿಮೆ ಇದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿನ ಸೋಂಕಿತರ ಪ್ರಮಾಣವೂ ಹೆಚ್ಚೇನಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next