Advertisement

ಮಾ.24ಕ್ಕೆ ಬಿಸಿಸಿಐ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ

03:45 AM Mar 21, 2017 | Team Udayavani |

ನವದೆಹಲಿ: ಲೋಧಾ ಸಮಿತಿ ಶಿಫಾರಸಿನಲ್ಲಿರುವ ಒಂದು ರಾಜ್ಯಕ್ಕೆ ಒಂದೇ ಮತ ನಿಯಮವನ್ನು ವಿರೋಧಿಸಿ ವಿವಿಧ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸೇರಿದಂತೆ ಬಿಸಿಸಿಐಗೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಮಾ.24ಕ್ಕೆ ಮುಂದೂಡಿದೆ. 

Advertisement

ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಒಂದು ರಾಜ್ಯಕ್ಕೆ ಒಂದೇ ಮತವಿದೆ. ಇದರ ಪರಿಣಾಮ ಮುಂಬೈ ಮತದಾನದ ಹಕ್ಕು ಕಳೆದುಕೊಂಡಿದೆ. ಅಲ್ಲದೇ ಪೂರ್ಣಕಾಲಿಕ ಸಂಸ್ಥೆಗಳಲ್ಲದ ರೈಲ್ವೇಸ್‌, ಸರ್ವಿಸಸ್‌, ಭಾರತ ವಿಶ್ವವಿದ್ಯಾನಿಲಯಗಳ ಸಂಘಟನೆಗಳೂ ಕೂಡ ತಮಗೆ ಮತದಾನದ ಹಕ್ಕು ನೀಡುವಂತೆ ಮನವಿ ಮಾಡಿವೆ. ಲೋಧಾ ಶಿಫಾರಸಿನ ಜಾರಿಯನ್ನು ವಿರೋಧಿಸಿಯೂ ಅರ್ಜಿ ಸಲ್ಲಿಕೆಯಾಗಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಸೋಮವಾರ ನಡೆಯಬೇಕಿದ್ದ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next