ಹಿನ್ನೆಲೆಯಲ್ಲಿ ನಗರದ ಸ್ವತ್ಛತೆ, ಮೂಲಸೌಕರ್ಯ ಮತ್ತು ಸಮಾವೇಶ ಜರುಗುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿನ ಅಂತಿಮ ಸಿದ್ಧತಾ ಕಾರ್ಯಗಳ ಕುರಿತು ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಪರಿಶೀಲನೆ ನಡೆಸಿದರು.
Advertisement
ಸಮಾವೇಶ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳ, ಗೊರಗುಂಟೆಪಾಳ್ಯ, ಭದ್ರಪ್ಪ ಲೇಔಟ್, ಮೇಕ್ರಿ ಸರ್ಕಲ್, ಯಶವಂತಪುರ ಸೇರಿದಂತೆ ಇತರೆ ಸ್ಥಳಗಳ ಪರಿಶೀಲನೆ ನಡೆಸಿದ ಸಚಿವರು, ನಗರದ ಸೌಂದರ್ಯ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಳಸೇತುವೆಯ ಗೋಡೆಗಳ ಬಣ್ಣ ಬಳಿಯುವ ಕೆಲಸ ಪೂರ್ಣಗೊಳ್ಳದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, ದೇಶ-ವಿದೇಶದಿಂದ ಪ್ರತಿನಿಧಿಗಳು ಆಗಮಿಸುತ್ತಿರುವ ವೇಳೆ ನಗರದ ಘನತೆ ಕಾಪಾಡುವಂತೆ ತಾಕೀತು ಮಾಡಿದರು. ರಸ್ತೆ ಕಾಮಗಾರಿಗಳ ಮತ್ತು ಗೊರಗುಂಟೆಪಾಳ್ಯದಲ್ಲಿ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆಯ ಪರಿಶೀಲನೆ ನಡೆಸಿದರು. ರೈಲ್ವೆ ಹಳಿಯ ಮೇಲೆ ನಿರ್ಮಾಣವಾಗಿರುವ ಮೇಲ್ಸೇತುವೆಗೆ ಮೂರು ವರ್ಷಗಳಿಂದ ಭೂಸ್ವಾಧೀನವಾಗದೆ ಮಸ್ಯೆಯಾಗಿತ್ತು. 660 ಮೀಟರ್ ಉದ್ದದ ಮೇಲ್ಸೇತುವೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಚಿವ ಆರ್. ವಿ.ದೇಶಪಾಂಡೆ ಇದೇ ವೇಳೆ ತಿಳಿಸಿದರು.
Related Articles
ಪಾಲ್ಗೊಳ್ಳುವುದರಿಂದ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
Advertisement
ಎಟಿಎಂ, ಬ್ಯಾಂಕ್ ವ್ಯವಸ್ಥೆಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಭಾರತ್ ದಿವಸ್ ಸಮಾವೇಶದಲ್ಲಿ ಭಾಗವಹಿಸುವ ದೇಶ-ವಿದೇಶದ ಜನತೆಗೆ ಹಣದ ಸಮಸ್ಯೆ ಎದುರಾಗದಂತೆ ಎಟಿಎಂ, ತಾತ್ಕಾಲಿಕ ಬ್ಯಾಂಕ್ ವ್ಯವಸ್ಥೆ ಮಾಡಬೇಕು ಎಂದು ಸಚಿವ ದೇಶಪಾಂಡೆ ಸೂಚನೆ ನೀಡಿದ್ದಾರೆ. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ವಿದೇಶೀಯರಿಗೆ ಕರೆನ್ಸಿ ವಿನಿಮಯಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ವಿದೇಶೀಯರು ಕೇಂದ್ರದಿಂದ ಹೊರಗೆ
ಹೋಗಿ ಎಟಿಎಂ ಮುಂಭಾಗ ಸಾಲು ನಿಲ್ಲಲು ಸಾಧ್ಯವಿಲ್ಲ. ನೋಟುಗಳು ಇಲ್ಲೇ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದರು. ಈ ವೇಳೆ ಕೇಂದ್ರದ ಆವರಣದಲ್ಲಿ ನಾಲ್ಕು ಮೊಬೈಲ್ ಎಟಿಎಂ ಹಾಗೂ ವಿದೇಶಿ ಕರೆನ್ಸಿ ವಿನಿಮಯಕ್ಕೆ ತಾತ್ಕಾಲಿಕ ಬ್ಯಾಂಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕತಾರ್ನಿಂದ ಹೆಚ್ಚು ಪ್ರತಿನಿಧಿಗಳು
ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಭಾರತ್ ದಿವಸ್ ಸಮಾವೇಶಕ್ಕೆ ಒಂದು ಸಾವಿರಕ್ಕಿಂತ ಹೆಚ್ಚು ವಿದೇಶಿಗರ
ನೋಂದಣಿಯಾಗಿದ್ದು, ಈ ಪೈಕಿ ಕತಾರ್ ದೇಶವೊಂದರಿಂದಲೇ ಸುಮಾರು 140ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ವಿವಿಧ ದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಹೋಲಿಸಿದರೆ ಕತಾರ್ ರಾಷ್ಟ್ರದಿಂದಲೇ ಹೆಚ್ಚಿನ ಪ್ರತಿನಿಧಿಗಳು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಧ ವೃತ್ತಿಯ 140 ಪ್ರತಿನಿಧಿಗಳು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಕತಾರ್ನ ಭಾರತೀಯ ರಾಯಭಾರಿ ಪಿ.ಕುಮಾರನ್ ನೇತೃತ್ವದಲ್ಲಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಕೆ.ಮಧು ತಿಳಿಸಿದ್ದಾರೆ.