Advertisement

ಬಂದ್‌ಗೆ ಅನುಮತಿ ಇಲ್ಲ

07:54 AM Jan 31, 2018 | |

ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬ ಬೇಡಿಕೆ ಇಟ್ಟು ಫೆ.4ರಂದು ಕರೆ ನೀಡಿರುವ “ಬೆಂಗಳೂರು ಬಂದ್‌’ಗೆ ಸರ್ಕಾರ ಅನುಮತಿ ನೀಡುವುದಿಲ್ಲ. ಸುಪ್ರೀಂಕೋರ್ಟ್‌ ಆದೇಶದಂತೆ ಈ ರೀತಿ ಬಂದ್‌ಗಳಿಗೆ ಸರ್ಕಾರ ಅನುಮತಿ ನೀಡಲು ಬರುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. 

Advertisement

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‌ ಮಾಡಲು ಸರ್ಕಾರ ಅನುಮತಿ ನೀಡುವುದಿಲ್ಲ. ನ್ಯಾಯಾಲಯ ಸಹ ಇದನ್ನು ಸಮ್ಮತಿಸುವುದಿಲ್ಲ. ಪ್ರತಿಭಟನೆ ನಡೆಸಲೂ ಪೊಲೀಸ್‌ ಅನುಮತಿ ಪಡೆಯಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಗೂ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ನಿಗದಿತ ಸ್ಥಳ, ಸೀಮಿತ ಸ್ಥಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ,
ರ್ಯಾಲಿ ನಡೆಸಬಹುದು. ಆದರೆ, ಕೇಂದ್ರ ಸಚಿವರು, ಸಂಸದರ ಮನೆಗಳು ಎದುರು ಪ್ರತಿಭಟನೆ ಅಥವಾ ಘೇರಾವ್‌ ನಡೆಸಬಾರದು. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next