Advertisement

ಕಾರಿನ ಕಿಟಕಿ ಗಾಜಿಗೆ ಕತ್ತು ಸಿಲುಕಿ ಮಗು ಸಾವು

11:23 PM Apr 24, 2019 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ದೊಡ್ಡಗನ್ನಿ ಗ್ರಾಮದಲ್ಲಿ ಕತ್ತು ಕಾರಿನ ಕಿಟಕಿ ಗಾಜಿಗೆ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ತುಮಕೂರು ಜಿಲ್ಲೆ ತುರುವೇಕರೆ ತಾಲೂಕು ದಂಡಿಶಿವರ ಗ್ರಾಮದ ಇಂದ್ರಾಣಿ ಉಮೇಶ್‌ ಅವರ ಮಗು ರತನ್‌ಶೆಟ್ಟಿ (3) ಮೃತ ಬಾಲಕ.

Advertisement

ಮಗು ಅಜ್ಜನ ಮನೆಯಲ್ಲಿ ಉಳಿದಿತ್ತು. ಬುಧವಾರ ಬಳಗ್ಗೆ ಮಗುವಿನ ಸೋದರ ಮಾವ ಉಮೇಶ್‌ ತನ್ನ ಕಾರಿನಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಉಮೇಶ, ಕಾರಿನಲ್ಲಿ ಮಗು ಬಿಟ್ಟು ತೆಂಗಿನ ಮರಕ್ಕೆ ನೀರು ಹಾಕುವಾಗ ಮಗು ಕಾರಿನ ಕಿಟಕಿ ಬಾಗಿಲಿನಲ್ಲಿ ಕತ್ತು ಹೊರಹಾಕಿತ್ತು.

ಈ ವೇಳೆ, ಮಗುವಿನ ಕೈ ಕಾರಿನ ಗಾಜಿನ ಸ್ವಿಚ್‌ ಮೇಲೆ ಇಟ್ಟಿದ್ದರಿಂದ ಕಿಟಕಿ ಗಾಜು ಮೇಲೆ ಹೋಗಿ ಮಗುವಿನ ಕತ್ತಿಗೆ ಜಖಂ ಆಗಿದೆ. ಕೂಡಲೇ ಉಮೇಶ ಆಸ್ಪತ್ರೆಗೆ ಕರೆ ತಂದರಾದರೂ ಚಿಕಿತ್ಸೆ ಫ‌ಲಕಾರಿಯಾದೆ ಮಗು ಮೃತ ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next