Advertisement

ನದಿಗೆ ಹಾರಿದ ಯುವತಿಯ ರಕ್ಷಣೆ ಮಾಡಿದ ಆಟೋ ಚಾಲಕ

12:28 AM Mar 24, 2024 | Team Udayavani |

ಆಲಂಕಾರು: ಯುವತಿಯೊಬ್ಬಳು ತನ್ನ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಸಮೀಪದ ಶಾಂತಿಮೊಗರು ಸೇತುವೆ ಬಳಿ ಶನಿವಾರ ಸಂಜೆ ನಡೆದಿದೆ. ಸ್ಥಳದಲ್ಲಿದ್ದ ಆಟೋ ಚಾಲಕ ನದಿಗೆ ಹಾರಿ ಯುವತಿಯ ಪ್ರಾಣ ರಕ್ಷಿಸಿದ್ದಾನೆ.

Advertisement

ಯುವತಿ ಪಕ್ಕದ ಕಾಣಿಯೂರಿನವಳೆಂದು ಹೇಳಲಾಗುತ್ತಿದ್ದು, ಖಚಿತ ಪಟ್ಟಿಲ್ಲ. ಇನ್ನೊಂದು ಮೂಲದ ಪ್ರಕಾರ ಯುವತಿ ನೆಲ್ಯಾಡಿ ಸಮೀಪದ ಬಲ್ಯದವಳೆಂದು ಹೇಳಲಾಗುತ್ತಿದೆ.

ಸ್ಥಳೀಯರ ಪ್ರಕಾರ ಯುವತಿ ಜತೆ ಯುವಕನೊಬ್ಬ ಬಂದಿದ್ದ ಎನ್ನಲಾಗುತ್ತಿದೆ. ನದಿಗೆ ಹಾರಿದ ಯುವತಿಯನ್ನು ರಕ್ಷಿಸಿದ ಆಟೋ ಚಾಲಕ ಸ್ಥಳೀಯರ ನೆರವಿನಿಂದ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡ ಬಳಿಕ ಯುವತಿ ಚೇತರಿಸಿಕೊಂಡಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next